ಉಡುಪಿ,ನ12 (DaijiworldNews/MS): ಇಲ್ಲಿನ ಕೊಡಂಕೂರು ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಹಿರಿಯ ಕಲಾವಿದ ಪಿ ಎನ್ ಆಚಾರ್ಯ ಅವರು ಚಿತ್ರಿಸಿದ ತುಳು ಅಪ್ಪೆ (ತುಳು ತಾಯಿ) ಭಾವಚಿತ್ರವನ್ನು ನವೆಂಬರ್ 11 ರಂದು ಗುರುವಾರ ಅನಾವರಣಗೊಳಿಸಲಾಯಿತು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಕಲಾಕೃತಿಯನ್ನು ಅನಾವರಣಗೊಳಿಸಿದರು.
ಈ ವೇಳೆ ಜಯಕರ ಶೆಟ್ಟಿ ಮಾತನಾಡಿ, ‘ತುಳು ಅಪ್ಪೆ (ತುಳು ತಾಯಿ) ಚಿತ್ರವನ್ನು ರಚಿಸಿ ತುಳುನಾಡಿಗೆ ಅರ್ಪಿಸಿದ ಮೊದಲ ಕಲಾವಿದ ಪಿ ಎನ್ ಆಚಾರ್ಯ. ಚಿತ್ರವು ವೈವಿಧ್ಯಮಯ ಸಂಸ್ಕೃತಿಯನ್ನು ತೋರಿಸುತ್ತದೆ. 8000ಕ್ಕೂ ಹೆಚ್ಚು ಮಂದಿ ತುಳು ಲಿಪಿ (ಭಾಷೆ) ಕಲಿಯುತ್ತಿದ್ದಾರೆ. ಹೆಚ್ಚಿನ ಜನರು, ಸಂಘ ಸಂಸ್ಥೆಗಳು, ದೇವಸ್ಥಾನಗಳು ತುಳು ಲಿಪಿಯನ್ನು ಅಳವಡಿಸಿಕೊಂಡು ಪ್ರೋತ್ಸಾಹಿಸುತ್ತಿವೆ. ತುಳು ಭಾಷೆಯ ಉತ್ಕೃಷ್ಟತೆಗೆ ಇದೊಂದು ಉತ್ತಮ ಸಂಕಲ್ಪ ಎಂದು ಪಿ ಎನ್ ಆಚಾರ್ಯ ಅವರ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು'.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ ಎನ್ ಆಚಾರ್ಯ, 'ನನ್ನ ಕನಸು ಇಂದು ನನಸಾಗಿದೆ. ಅನೇಕ ವಿದ್ವಾಂಸರ ಬೆಂಬಲದಿಂದ ನಾನು ಈ ಕಲೆಯನ್ನು ಪೂರ್ಣಗೊಳಿಸಿದ್ದೆ. ತುಳು ಜನರು ಮತ್ತು ತುಳು ಭಾಷೆ ಸುಂದರವಾಗಿದೆ. ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿದ್ದೇನೆ.ನನ್ನ ಚಿತ್ರಕಲೆಯಲ್ಲಿ ತುಳುನಾಡಿನ ಮಹತ್ವ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯತೆಯನ್ನು ಬಿಂಬಿಸಲು ಪ್ರಯತ್ನಿಸಿದ್ದೇನೆ. ನನ್ನ ಹಿಂದಿನ ಯೋಜನೆಯಾದ 'ಕೋಟಿ-ಚೆನ್ನಯ' ಕಲೆಗೆ ರಾಜ್ಯಾದ್ಯಂತ ಅಗಾಧ ಪ್ರತಿಕ್ರಿಯೆ ಸಿಕ್ಕಿತು. ವಿಶ್ವಕರ್ಮ ಸೇರಿದಂತೆ ಹಲವು ಶ್ರೇಷ್ಠ ವ್ಯಕ್ತಿತ್ವಗಳನ್ನು ರೂಪಿಸಿದ್ದೇನೆ. ಈ ಕಲೆಗೆ ಜನ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಬೇಕಾದರೆ ನನ್ನ ತುಳು ಅಪ್ಪೆ (ತುಳು) ಕಲೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಸಿದ್ಧನಿದ್ದೇನೆ.ದೇವಿಯು ಎಲ್ಲರಿಗೂ ಅನುಗ್ರಹಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರನ್ನು ಗಣ್ಯರು ಸನ್ಮಾನಿಸಿದರು.ರಘುನಾಥ ಮಾಬಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಅತಿಥಿಗಳಾದ ಮಹಾಬಲ್ ಕುಂದರ್, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಸಮಿತಿ ಸದಸ್ಯ ಕೊಡಂಕೂರು ರಘುನಾಥ ಕೋಟ್ಯಾನ್, ಯೋಗೀಶ್ ಆಚಾರ್ಯ ಕೊಡಂಕೂರು ಮೂಡಬೆಟ್ಟು ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಬಂಗೇರ, ಚೇತನ್ ನಾರ್ವೇಕರ, ಉದ್ಯಮಿ ಅಲೆವೂರು ಯೋಗೀಶ್ ಆಚಾರ್ಯ ಉಪಸ್ಥಿತರಿದ್ದರು.