ಉಡುಪಿ, ನ.11 (DaijiworldNews/HR): ಹಿರಿಯಡ್ಕದ ಗುಡ್ಡೆ ಅಂಗಡಿ ಬಳಿ ಗುರುವಾರ ಬೆಳಗ್ಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಬೈಲೂರು ಮೂಲದ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಮಣಿಪಾಲ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಲಬೆಟ್ಟು ಬೈಲೂರು ನಿವಾಸಿ ವಿಘ್ನೇಶ್ ಪೂಜಾರಿ ಎಂದು ಗುರುತಿಸಲಾಗಿದೆ.
ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಮಣಿಪಾಲದಿಂದ ಬೈಲೂರಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹಾಲಿನ ವ್ಯಾನ್ ಬಜಗೋಳಿಯಿಂದ ಉಡುಪಿಗೆ ತೆರಳುತ್ತಿತ್ತು.
ಹಿರಿಯಡ್ಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.