ಕಾರವಾರ, ನ. 09 (DaijiworldNews/SM): ಈ ಹಿಂದೆ ವಿವಾದಾತ್ಮಕ ಹೇಳಿಕೆಗಳಾ ಮೂಲಕ ಸುದ್ದಿಯಾಗುತ್ತಿದ್ದ ಉತ್ತರ ಕನ್ನಡದ ಸಂಸದ ಹಾಗೂ ಮಾಜಿ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಕರಾವಳಿ ಸಂಪೂರ್ಣ ದೇಶದ್ರೋಹಿ ತಾಣವಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಾರವಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಮಂಗಳೂರಿನ ಅಭಿವೃದ್ಧಿಯ ಲಾಭ ದೇಶದ್ರೋಹಿಗಳು ಪಡೆಯುತ್ತಿದ್ದಾರೆ. ಕೇರಳದವರು ಮಂಗಳೂರಿನ ಅಭಿವೃದ್ಧಿಗೆ ತಲೆನೋವಾಗಿದ್ದು, ಮಂಗಳೂರು ಸಂಪೂರ್ಣವಾಗಿ ಕೈ ತಪ್ಪಿ ಹೋಗುತ್ತಿದೆ ಎಂದಿದ್ದಾರೆ.
ಮಂಗಳೂರಿಗೆ ಮೂಲ ನಿವಾಸಿಗಳಿಂದ ಯಾವುದೇ ಸಮಸ್ಯೆ ಇಲ್ಲ. ನಮ್ಮ ಊರಿನ ಅಭಿವೃದ್ಧಿಯ ಲಾಭ ಕೇರಳಿಗರಪಾಲಾಗುತ್ತಿದೆ. ಇಲ್ಲಿನ ಲಾಭ ನಮಗೆ ಸಿಗಬೇಕು. ನಾವು ಬೇರೆಡೆ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದು, ಅಭಿವೃದ್ಧಿಯ ದಿಕ್ಕಿನಲ್ಲಿ ನಾವು ದಾಪುಗಾಲಿಟ್ಟಿಲ್ಲ ಎಂದಿದ್ದಾರೆ.
ಉತ್ತರ ಕನ್ನಡವನ್ನು ಹಾಗಾಗಲು ಬಿಡೆವುದಿಲ್ಲ. ಉತ್ತರ ಕನ್ನಡ ಸದ್ಯ ಅಭಿವೃದ್ಧಿ ಪಥದಲ್ಲಿದೆ. ಮಂಗಳೂರನ್ನು ಮೀರಿಸುವ ಬಂದರು ನಮ್ಮಲ್ಲಿ ನಿರ್ಮಿಸುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಏರ್ ಪೋರ್ಟ್ ಕೂಡ ಬರಲಿದೆ. ಉತ್ತರ ಕನ್ನಡದ ಅಭಿವೃದ್ಧಿ ಮಾಡಿಯೇ ಸಿದ್ಧ ಎಂದು ಸಂಸದ ಅನಂತ ಕುಮಾರ್ ಹೇಳಿದ್ದಾರೆ.