ಸುಳ್ಯ, ನ.7 (DaijiworldNews/HR): ಸುಳ್ಯ ತಾಲೂಕಿನ ಬಾಳಿಲ ಎಂಬಲ್ಲಿ ಕಟ್ಟಡದಿಂದ ಯುವಕನೋರ್ವ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಕಾರ್ಮಿಕನನ್ನು ಮಧ್ಯಪ್ರದೇಶದ ಮಹೇಶ್ ಸಿಂಗ್ (20) ಎಂದು ಗುರುತಿಸಲಾಗಿದೆ.
ಬಾಳಿಲದಲ್ಲಿ ಗಿರಿಜನ ಆಶ್ರಮ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು ಅದರ ಕೆಲಸಕ್ಕೆಂದು ಬಂದಿದ್ದ ಮಧ್ಯಪ್ರದೇಶದ ಮಹೇಶ್ ಹೊಸ ಕಟ್ಟಡದ ಹತ್ತಿರವಿರುವ ಹಳೆಯ ಕಟ್ಟಡದಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.