ಮಂಗಳೂರು, ನ.06 (DaijiworldNews/HR): ದೈಜಿವರ್ಲ್ಡ್ ವಾಹಿನಿಯು ನವರಾತ್ರಿ ಪ್ರಯುಕ್ತ ನೂತನ್ ಕ್ಲೋತ್ ಸೆಂಟರ್, ಮಡಂತ್ಯಾರು ಇದರ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ 'ನವರಂಗಿ ಸೀರೆ' ವಿಶೇಷ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ದೈಜಿವರ್ಲ್ಡ್ ವಾಹಿನಿ ಕಛೇರಿಯಲ್ಲಿ ನಡೆಯಿತು.
ಮಾನವ ಸಂಪನ್ಮೂಲ ನಿರ್ದೇಶಕ ರೋನಾಲ್ಡ್ ನಜ್ರೆತ್, ಪ್ರಸರಣ ವಿಭಾಗದ ಮುಖ್ಯಸ್ಥೆ ಗೀತಾ ಬಂಗೇರ ಇವರು ವಿಜೇತರಿಗೆ ಸ್ಮರಣಿಕೆಯೊಂದಿಗೆ ನಗದು ಬಹುಮಾನಗಳನ್ನು ವಿತರಿಸಿ ಶುಭಹಾರೈಸಿದರು.
ಕರಾವಳಿಯ ಪ್ರಸಿದ್ಧ ವಸ್ತ್ರ ಮಳಿಗೆಯಾದ ನೂತನ್ ಕ್ಲೋತ್ ಸೆಂಟರ್, ಮಡಂತ್ಯಾರು ವತಿಯಿಂದ ನಡೆಸಲ್ಪಟ್ಟ ಸ್ಪರ್ದೆಯಲ್ಲಿ ಶಿವಸಾಂಚಿ, ಕೊಲ್ಯ ತಂಡವು 15 ಸಾವಿರ ರುಪಾಯಿಗಳ ನಗದು ಬಹುಮಾನಕ್ಕೆ ಆರ್ಹವಾಗಿತ್ತು. ಸ್ಪರ್ದೆಯಲ್ಲಿ ಜ್ಯೋತಿಸ್ಮತಿ ಮರೋಲಿ ತಂಡವು 10 ಸಾವಿರ ರೂ ನಗದನ್ನು ಗೆದ್ದಿತ್ತು. ಇದರೊಂದಿಗೆ ಇತರ 9 ತಂಡಗಳು ದಿನಕ್ಕೊಂದರಂತೆ ತಲಾ 3 ಸಾವಿರ ರೂಪಾಯಿ ನಗದನ್ನು ಗೆದ್ದಿದ್ದುವು.
ನೂತನ್ ಕ್ಲೋತ್ ಸೆಂಟರ್ ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ದೈಜಿವರ್ಲ್ಡ್ ವಾಹಿನಿ ಮೂಲಕ ನವರಂಗಿ ಸೀರೆ ಫೊಟೋ ಸ್ಪರ್ದೆಯನ್ನು ಆಯೋಜಿಸುತ್ತಿದ್ದು ಸಾವಿರಾರು ತಂಡಗಳು ಇದರಲ್ಲಿ ಪಾಳ್ಗೊಳ್ಳುತ್ತಿವೆ. ಮಿತ ದರ ಹಾಗೂ ಶ್ರೇಷ್ಟ ಮಟ್ಟದ ಬಟ್ಟೆಬರೆಗಳಿಗೆ ಹೆಸರುವಾಸಿಯಾದ ನೂತನ್ ಕ್ಲೋತ್ ಸೆಂಟರ್ ಮಳಿಗೆಯು ಕರಾವಳಿಯ ಕುಟುಂಬಗಳ ಅಚ್ಚುಮೆಚ್ಚಿನ ವಸ್ತ್ರಮಳಿಗೆಯಾಗಿ ಪ್ರಸಿದ್ಧಿಯಾಗಿದೆ.