ಸುಳ್ಯ, ನ 06 (DaijiworldNews/MS): ನದಿಗೆ ಮೀನು ಹಿಡಿಯಲು ಹೋಗಿದ್ದ ಯುವಕನೋರ್ವನಿಗೆ ಬ್ಯಾಟರಿ ವಿದ್ಯುತ್ ಪ್ರವಹಿಸಿ ಮೃತರಾದ ಘಟನೆ ದೇವಚಳ್ಳ ಗ್ರಾಮದ ಕರಂಗಲ್ಲಿನ ನಡೆದಿದೆ.
ನ.5 ರ ರಾತ್ರಿ ಕರಂಗಲ್ಲಿನ ದಿ. ಕೇಶವ ಗೌಡ ಅವರ ಪುತ್ರ ಕರಂಗಲ್ಲಿನ ಪ್ರಕಾಶ್ (37) ಎಂಬವರು ಮಾಡಬಾಕಿಲು ಭಾಗದ ನದಿಗೆ ತಮ್ಮ ಸ್ನೇಹಿತನೊಂದಿಗೆ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದಾರೆ. ಮೀನು ಹಿಡಿಯುತ್ತಿರುವ ಸಂದರ್ಭ ಇನ್ವರ್ಟರ್ ಬ್ಯಾಟರಿ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ.
ಸುಬ್ರಹ್ಮಣ್ಯ ಎಸ್ ಐ ಜಂಬೂರಾಜ್ ಮಾಹಾಜನ್ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಮೃತರು ತಾಯಿ ಭುವನೇಶ್ವರಿ, ಪತ್ನಿ ದಿವ್ಯ ಹಾಗೂ ಪುತ್ರಿ ಹಿತಾಶ್ರೀ, ಸಹೋದರ ತೇಜಕುಮಾರ್, ಸಹೋದರಿ ಶ್ರೀಮತಿ ಸಂದ್ಯಾ ಹಾಗೂ ಬಂಧುಗಳನ್ನು ಅಗಲಿದ್ದಾರೆ