ಕಾಸರಗೋಡು, ನ. 04 (DaijiworldNews/SM): ಮೂಡಬಿದ್ರಿಯಿಂದ ಕಳವುಗೈಯ್ಯಲಾದ ವಾಹನ ಸಹಿತ ಇಬ್ಬರನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಲಾಗಿದೆ. ಉದುಮ ಮಾಂಗಾಡ್ ನ ರಂಸಾನ್(21) ಮತ್ತು ಮಂಜೇಶ್ವರ ದ ಅಲ್ತಾಫ್(20) ಬಂಧಿತರು.
ಬುಧವಾರ ರಾತ್ರಿ ಚಿತ್ತಾರಿ ಚಾಮುಂಡಿ ಗುಡ್ಡೆ ಎಂಬ ಲ್ಲಿಂದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆಬಂದಿದೆ . ಮೂಡಬಿದ್ರಿ ಯಿಂದ ಕಳವು ಗೈದ ಜೀಪು ಸಹಿತ ಕಾ ಞ೦ಗಾಡ್ ಗೆ ಬರುತ್ತಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಾಹನ ತಪಾಸಣೆ ನಡೆಸಿದ್ದು , ಈ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಬೊಲೆರೋ ವಾಹನವನ್ನು ನಿಲ್ಲಿಸಿ ಅದರಲ್ಲಿದ್ದವರನ್ನು ಪ್ರಶ್ನಿಸಿದಾಗ ತದ್ವಿರುದ್ದ ಉತ್ತರ ನೀಡಿದ್ದು , ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ವಾಹನ ಕಳವುಗೈದುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ತಂಡದ ಇತರರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ನಡೆದ ಕೆಲ ವಾಹನ ಕಳವು ಪ್ರಕರಣಗಳಲ್ಲಿ ಇವರು ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ