ಕಾಸರಗೋಡು, ನ. 4 (DaijiworldNews/HR): ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಇಳಿಕೆಗೆ ಕೇರಳದ ಸರಕಾರ ಮುಂದಾಗದಿರುವುದನ್ನು ಪ್ರತಿಭಟಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಗರದ ಕರಂದಕ್ಕಾಡ್ನಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಪ್ರತಿಕೃತಿ ದಹನ ಮಾಡಿದರು.
ಕೇಂದ್ರ ಸರಕಾರ ತೆರಿಗೆ ಕಡಿಮೆ ಮಾಡಿದ್ದರೂ ಕೇರಳ ಸರಕಾರ ತೆರಿಗೆ ಇಳಿಕೆ ಮಾಡಲು ನಿರಾಕರಿಸಿದ್ದು, ಕುರಿತು ರಾಜ್ಯ ಹಣಕಾಸು ಸಚಿವರು ಹೇಳಿಕೆ ನೀಡಿರುವುದು ಖಂಡನೀಯ ಎಂದು ಯುವಮೋರ್ಚಾ ಆರೋಪಿಸಿದೆ.
ಜಿಲ್ಲಾಧ್ಯಕ್ಷ ಧನಂಜಯ ಮಧೂರು ಪ್ರತಿಭಟನೆಯನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಜಿತೇಶ್ ಎನ್.ಅಧ್ಯಕ್ಷತೆ ವಹಿಸಿದ್ದರು. ಅಜಿತ್ ಕುಮಾರ್, ಅರ್ಪಿತಾ ದ್ವಾರಕಾ ಮೊದಲಾದವರು ನೇತೃತ್ವ ನೀಡಿದರು.