ಬಂಟ್ವಾಳ, ನ. 03 (DaijiworldNews/SM): ಕಾರಿಂಜ ಕ್ಷೇತ್ರದೊಳಗೆ ಚಪ್ಪಲಿ ಹಾಕಿ ಪ್ರವೇಶಿಸಿ ಅಪಮಾನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಶಕ್ಕೆ ಪಡೆದವರು ಉಳ್ಳಾಲ ಹಾಗೂ ಕಾಸರಗೋಡು ಮೂಲದವರು ಎಂದು ತಿಳಿದುಬಂದಿದೆ. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಪುಂಜಾಲಕಟ್ಟೆ ಎಸ್ ಐ ಸೌಮ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಾರಿಂಜ ಕ್ಷೇತ್ರದಲ್ಲಿ ಚಪ್ಪಲಿ ಹಾಕಿ ಅಪಮಾನಗೈಯಲಾಗಿತ್ತು.
ಇನ್ನು ಕ್ಷೇತ್ರದೊಳಗೆ ಚಪ್ಪಲಿ ಹಾಕಿ ತೆರಳಿದ ವೀಡಿಯೋವನ್ನು ಯುವಕರು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಿದ್ದರು.