ಬೆಳ್ತಂಗಡಿ, ನ. 02 (DaijiworldNews/HR): ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಅಜ್ಜ-ಅಜ್ಜಿಯೊಂದಿಗೆ ಇದ್ದ ಯುವತಿಯೊಬ್ಬಳು ಸ್ನೇಹಿತನ ಮನೆಗೆ ಹೋಗುವ ನೆಪದಲ್ಲಿ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಧರ್ಮಸ್ಥಳ ಪೊಲೀಸ್ ಠಾಣೆ
ಶಿರ್ಲಾಲು ಗ್ರಾಮದ ಮಾಣಿಲದ ಗೋಜ ಮೇರ ಎಂಬವರ ಪುತ್ರಿ ಕುಸುಮಾವತಿ (23) ಕಾಣೆಯಾದ ಯುವತಿ.
ಕುಸುಮತಿ ಚಿಕ್ಕಂದಿನಿಂದಲೂ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ಅಜ್ಜ-ಅಜ್ಜಿಯ ಮನೆಯಲ್ಲಿ ಅಕ್ಟೋಬರ್ 24 ರಂದು ಉಪ್ಪಿನಂಗಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗುವುದಾಗಿ ತನ್ನ ಚಿಕ್ಕಮ್ಮ ಶೋಭಿತಾಗೆ ಹೇಳಿ ಮನೆಯಿಂದ ಹೋಗಿದ್ದ ಬಳಿಕ ನಾಪತ್ತೆಯಾಗಿದ್ದಾಳೆ.
ಶೋಭಿತಾ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.