ಪಡುಬಿದಿರೆ, ನ. 01 (DaijiworldNews/SM): ರವಿವಾರ ರಾತ್ರಿ ಬೈಕಿಗೆ ಮೀನಿನ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿದ್ದು, ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟ ಧಾರುಣ ಘಟನೆ ಉಚ್ಚಿಲದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಣಿಯೂರು ತಿರುವಿನಲ್ಲಿ ಘಟಿಸಿದೆ.
ಮೃತ ಬೈಕ್ ಸವಾರರನ್ನು ಉಚ್ಚಿಲ ಭಾಸ್ಕರ ನಗರ ನಿವಾಸಿ ಪ್ರಸ್ತುತ ಎಲ್ಲೂರು ಗ್ರಾಮದಲ್ಲಿ ವಾಸವಾಗಿರುವ 49 ವರ್ಷದ ಶ್ರೀಧರ ಆಚಾರ್ಯ ಎಂದು ತಿಳಿದುಬಂದಿದೆ. ಅವರು ಕೆಲಸ ಮುಗಿಸಿ ಪಣಿಯೂರು ರಸ್ತೆಗೆ ಬರುತ್ತಿರುವಾಗ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮೀನಿನ ಲಾರಿ ಚಾಲಕ ಡಿಕ್ಕಿ ಹೊಡೆದಿದ್ದು, ಅವರು ತೀವ್ರ ಗಾಯಗೊಂಡಿದ್ದರು.
ಅಪಘಾತದಲ್ಲಿ ಬೈಕ್ ಮೀನಿನ ಲಾರಿಯ ಅಡಿಗೆ ಸಿಲುಕಿ ಕೊಂಡಿತ್ತು. ಸ್ಥಳೀಯರು ತುರ್ತಾಗಿ ಗಾಯಗೊಂಡ ಶ್ರೀಧರ ಆಚಾರ್ಯರವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದಾರಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.