ಮಂಗಳೂರು, ನ 01 (DaijiworldNews/MS): ಎರಡು ವರ್ಷದ ಮಗುವಿಗೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಉಪ್ಪು ನೀರಿನ ಮೀನು ತೊಟ್ಟಿಯಲ್ಲಿ ಎಸೆದು ಕೊಲೆಗೆ ಯತ್ನಿಸಿದ ಘಟನೆ ಭಾನುವಾರ ಸಂಜೆ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಗೆಬಜಾರ್ನಲ್ಲಿ ನಡೆದಿದೆ.
ಆರೋಪಿ ಚಂದನ್
ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿ ಬಿಹಾರ ಮೂಲ ಆರೋಪಿ ಚಂದನ್ ಎಂಬಾತನನ್ನು ಬಂಧಿಸಲಾಗಿದೆ.ಈತ ಎಳೆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೇ, ಬಳಿಕ ಮಗುವನ್ನು ಉಪ್ಪು ನೀರು ತುಂಬಿದ ಮೀನಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಲೆ ಮಾಡುವ ಯತ್ನ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಮಗುವಿನ ಪೋಷಕರು ಕೂಡ ಪೋಷಕರು ಬಿಹಾರ ಮೂಲದವರು.ಬಿಹಾರ ಮೂಲದ ಸುಮಾರು 70 ರಿಂದ 80 ಜನರು ತಮ್ಮ ಕುಟುಂಬದೊಂದಿಗೆ ಓಣ ಮೀನು ಸಂಸ್ಕರಣ ಪ್ರಕ್ರಿಯೆಯ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಿಹಾರದ ಮೂಲದ ಕಾರ್ಮಿಕರ ಕುಟುಂಬಗಳಲ್ಲಿ 6 ತಿಂಗಳಿಂದ 7 ವರ್ಷದೊಳಗಿನ ಸುಮಾರು ಮಕ್ಕಳಿದ್ದು, ಇವರನ್ನೆಲ್ಲಾ ಒಂದೇ ಕೊಠಡಿಯಲ್ಲಿ ಆರೈಕೆ ಮಾಡಲಾಗುತ್ತಿತ್ತು.
ಸಂತ್ರಸ್ತ ಪೋಷಕರು ತಮ್ಮ ಕೆಲಸ ಮುಗಿಸಿ ಫ್ಯಾನ್ ಖರೀದಿಸಲು ನಗರಕ್ಕೆ ತೆರಳಿದ್ದರು. ವಾಪಸ್ ಬರುವಾಗ ಅವರ ಮಗು ಕಾಣೆಯಾಗಿತ್ತು. 2 ಗಂಟೆಗಳ ಹುಡುಕಾಟದಲ್ಲಿ ಮಗು ಮೀನು ತೊಟ್ಟಿಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊದಲು ೨ ವರ್ಷದ ಮಗು ನೀರಿನಲ್ಲಿ ಮುಳುಗಿದೆ ಎಂದು ಕರೆ ಬಂದ ಹಿನ್ನಲೆಯಲ್ಲಿ ಪೊಲೀಸರು ಧಾವಿಸಿದಾಗ ವೈದ್ಯಕೀಯ ಪರಿಶೀಲನೆ ವೇಳೆ ಮಗುವಿಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಪೊಲೀಸ್ ತನಿಖೆಯ ವೇಳೆ ಬಿಹಾರ ಮೂಲದ ವ್ಯಕ್ತಿಯೋರ್ವ ಮಗುವನ್ನು ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ಆತ ಲೈಂಗಿಕ ದೌರ್ಜನ್ಯ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.