ಮಂಗಳೂರು, ನ.01(DaijiworldNews/HR): ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ, ಪಿಲಾರು ಪಳ್ಳದ ಬಳಿ ಚಿರತೆ ಸಂಚರಿಸುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡಿದ್ದು, ನಗರದಲ್ಲಿ ಭಯದ ವಾತಾವರಣ ಮೂಡಿದೆ.
ಕುಂಪಲ ಪಿಲಾರು ಪಳ್ಳದ ಶಿವರಾಜ್ ಪೊನ್ನುಸ್ವಾಮಿ ಎಂಬ ಸ್ಥಳೀಯರೊಬ್ಬರು ರಾತ್ರಿ 9.30ರ ಸುಮಾರಿಗೆ ತಮ್ಮ ಮನೆಯಿಂದ ಮಗಳ ಮನೆಗೆ ಹೋಗುತ್ತಿದ್ದಾಗ ಚಿರತೆ ರಸ್ತೆ ದಾಟಿ ತನ್ನ ಮನೆಯ ಸಮೀಪ ಪೊದೆಗಳಿಗೆ ನುಗ್ಗುತ್ತಿರುವುದನ್ನು ಕಂಡಿದ್ದಾರೆ.
ಆರಂಭದಲ್ಲಿ ಅದು ಕಾಡುಬೆಕ್ಕು ಇರಬಹುದೆಂದು ಶಿವರಾಜ್ ಊಹಿಸಿದ್ದರು. ಆದರೆ, ಅದರ ಉದ್ದನೆಯ ಬಾಲ ಮತ್ತು ಬಣ್ಣವನ್ನು ನೋಡಿದ ಅವರು ಇದು ಚಿಕ್ಕ ಗಾತ್ರದ ಚಿರತೆ ಎಂದು ಅವರಿಗೆ ತಿಳಿದಿದೆ.
ಇನ್ನು ಈ ಪ್ರದೇಶದಲ್ಲಿ ಚಿರತೆ ಇರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.