ಕಾರ್ಕಳ, ನ 01 (DaijiworldNews/MS): ಕುಕ್ಕುಂದೂರು ಗುಂಡ್ಯಡ್ಕ ಕುಪ್ಪಬೆಟ್ಟು ಎಂಬಲ್ಲಿನ ಮನೆಯೊಂದರ ಬೆಡ್ ರೂಂ ಕಿಟಕಿಯಲ್ಲಿ ಇಟ್ಟಿದ್ದ ಉಂಗುರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಕೆಲಸದಾತನ ಕೃತ್ಯವನ್ನು ನಗರ ಠಾಣಾಧಿಕಾರಿ ಮಧು ಬಿ.ಇ ನೇತೃತ್ವದ ಪೊಲೀಸರು ಬಯಲುಗೊಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸರಳ ಶೆಟ್ಟಿ ಎಂಬವರು ಈ ಕುರಿತು ನಗರ ಠಾಣೆಗೆ ದೂರು ಸಲ್ಲಿಸಿದ್ದರು. 2021 ಆಗಸ್ಟ್ 15ರಂದು ಈ ಘಟನೆ ನಡೆದಿತ್ತು. ರೂ. 25 ಸಾವಿರ ಮೌಲ್ಯದ 5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಬೆಡ್ ರೂಂ ನ ಕಿಟಕಿಯಲ್ಲಿ ಇಟ್ಟು ಸ್ನಾನಕ್ಕೆ ಹೋಗಿ ವಾಪಾಸು ಬಂದಾಗ ಉಂಗುರ ಮಾಯವಾಗಿತ್ತು. ಮನೆಯ ವಿವಿಧೆಡೆಗಳಲ್ಲಿ ಹುಡುಕಾಡಿದರೂ ಯಾವುದೇ ಪ್ರಯೋಜನ ಬಾರದ ಹಿನ್ನಲ್ಲೆಯಲ್ಲಿ ಅವರು ಕಾರ್ಕಳ ನಗರ ಠಾಣೆಗೆ ದೂರು ಸಲ್ಲಿಸಿದ್ದರು.
ಸರಳಶೆಟ್ಟಿ ಅವರ ಮನೆಯಲ್ಲಿ ಬೆಳ್ತಂಗಡಿಯ ನಿವಾಸಿ ಎನ್ನಲಾದ ಜಯಪ್ರಕಾಶ ಮತ್ತು ವನಿತಾ ಕೆಲಸದವರಿದ್ದು, ದೂರು ನೀಡಿದ ಸಂದರ್ಭದಲ್ಲಿ ಜಯಪ್ರಕಾಶ್ ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಜಯಪ್ರಕಾಶನ ಚಲನವಲನ ಮೇಲೆ ನಿಗಾ ಇಟ್ಟಿದ್ದು, ಜಯಪ್ರಕಾಶನು ಸದ್ರಿ ಉಂಗುವರವನ್ನು ವೇಣೂರಿನ ನವೋದಯ ಸೊಸೈಟಿಯಲ್ಲಿ ಅಡವು ಇಟ್ಟು ಸಾಲ ಪಡೆದಿರುವ ಮಾಹಿತಿ ಲಭಿಸಿದೆ.