ಮಂಗಳೂರು, ಅ. 29 (DaijiworldNews/SM): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುನೀತ್ ರಾಜ್ ಕುಮಾರ್ ಅಗಲಿಕೆ ಒಂದು ಆಘಾತಕಾರಿ ಸುದ್ದಿಯಾಗಿದೆ. ಒಬ್ಬ ಬಾಲನಟನಾಗಿ, ಅತ್ಯುತ್ತಮ ನಟನಾಗಿ ತಂದೆಯಂತೆ ಅದ್ಭುತ ಹೆಸರು ಗಳಿಸಿದ್ದರು. ಪುನೀತ್ ಅಗಲಿಕೆ ರಾಜ್ಯಕ್ಕೆ ಒಂದು ದೊಡ್ಡ ನಷ್ಟ ಎಂದಿದ್ದಾರೆ.