ಉಡುಪಿ, ಅ.29 (DaijiworldNews/HR): ಗೂಡಂಗಡಿಗೆ ಅನುಮತಿ ನೀಡಿದ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಜಟಾಪಟಿ ನಡೆದಿದೆ.
ವಿರೋಧ ಪಕ್ಷದ ರಮೇಶ್ ಕಾಂಚನ್ ಅವರು ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಗೂಡಂಗಡಿಗಳಿಗೆ ಅನುಮತಿ ನೀಡಿದ ಕುರಿತು ಪ್ರಶ್ನಿಸಿದ್ದು, ಖಾಸಗಿ ಜಾಗವಾದರೂ ಅಲ್ಲಿ ರಸ್ತೆ ಡಾಮರೀಕರಣ ಮತ್ತು ದಾರಿ ದೀಪ ಕೆಲಸ ನಿರ್ವಹಿಸಿರುವುದು ನಗರಸಭೆ ಕಾಂಗ್ರೆಸ್ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಪ್ರತ್ಯಾರೋಪಿಸಿದ್ದಾರೆ.
ಇನ್ನು ಮಾಜಿಗಳೇ ಅಧಿಕಾರಿಗಳಿಗೆ ಕೆಲಸ ಮಾಡಿಸಲು ಸೂಚಿಸುತ್ತಿದ್ದಾರೆ ಈ ಮೂಲಕ ಅಧ್ಯಕ್ಷರ ಅಧಿಕಾರ ವನ್ನು ಕಸಿಯುತಿದ್ದಾರೆ ಎಂದು ರಮೇಶ್ ಕಾಂಚನ್ ಗಂಭೀರ ಆರೋಪ ಮಾಡಿದ್ದು, ನಗರಸಭೆ ಸಾಮಾನ್ಯ ಸಭೆಯಲ್ಲಿ ಆರೋಪ ಪ್ರತ್ಯಾರೋಪದ ಜಟಾಪಟಿ ನಡೆದಿದೆ.