ಮಂಗಳೂರು, ಅ. 28 (DaijiworldNews/SM): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು, ಮಂಗಳೂರು ಮನಪಾ ಸಹಾಯಕ ನಗರ ಯೋಜನಾಧಿಕಾರಿಗೆ ಶಿಕ್ಷೆ ಪ್ರಕಟವಾಗಿದೆ. ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಮನಪಾ ಸಹಾಯಕ ನಗರ ಯೋಜನಾಧಿಕಾರಿಯಾಗಿದ್ದ ಎಸ್ ಇ ಮಂಜುನಾಥ ಸ್ವಾಮಿ ಶಿಕ್ಷೆಗೊಳಗಾದವರು.
2007ರಲ್ಲಿ ಮನಪಾ ಸಹಾಯಕ ನಗರ ಯೋಜನಾಧಿಕಾರಿ ಮನೆ ಕಚೇರಿ ಮೇಲೆ ಲೋಕಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಇಂದು ಆರೋಪ ಸಾಬೀತು ಹಿನ್ನೆಲೆಯಲ್ಲಿ 5 ವರ್ಷ ಸಜೆ 35 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ನ್ಯಾಯಾಧೀಶ ಬಿಬಿ ಜಕಾತಿಯಿಂದ ತೀರ್ಪು ಪ್ರಕಟಿಸಿದ್ದಾರೆ. 35 ಲಕ್ಷ ರೂ. ದಂಡ ವಿಧಿಸಲು ತಪ್ಪಿದ್ದಲಿ 1 ವರ್ಷಗಳ ಹೆಚ್ಚುವರಿ ಸಜೆ ವಿಧಿಸುವ ಉಲ್ಲೇಖವನ್ನು ಮಾಡಲಾಗಿದೆ. ಲೋಕಯುಕ್ತ ಇನ್ಸ್ಪೆಕ್ಟರ್ ಪ್ರಸನ್ನ ವಿ ರಾಜು ದೂರು ನೀಡಿದ್ದು, ಡಿವೈಎಸ್ಪಿ ಸದಾನಂದ ವರ್ಣೇಕರ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.