ಉಡುಪಿ, ಅ.28 (DaijiworldNews/HR): 35 ಅಡಿ ಆಳದ ಬಾವಿಗೆ ಬಿದ್ದ ಕಾರ್ಮಿಕನನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿಯ ಪುತ್ತೂರಿನಲ್ಲಿ ನಡೆದಿದೆ.
ಬಾವಿ ಕ್ಲೀನಿಂಗ್ ಮಾಡುವ ವೇಳೆ ಕೇರಳ ಮೂಲದ ಪ್ರದೀಪ್ ಎಂಬಾತ ಬಿದ್ದಿದ್ದು, ಆತನನ್ನು ರಕ್ಷಣೆ ಮಾಡಲಾಗಿದೆ.
ಬಾವಿಯಿಂದ ಮೇಲಕ್ಕೆ ಬಾರದೆ ಜೀವನ್ಮಾರಣ ಸ್ಥಿತಿಯಲ್ಲಿದ್ದ ಕಾರ್ಮಿಕನನ್ನು ಉಡುಪಿ ಅಗ್ನಿಶಾಮಕ ಠಾಣಾದಿಕಾರಿ ಸತೀಶ್ ಎನ್. ಚಾಲಕರಾದ ಸುಧೀರ್, ಸತೀಶ್, ರವಿನಾಯ್ಕ್, ಮತ್ತು ವಿನಾಯಕ ಕಲ್ಮನೆ ಇವರು ಕಾರ್ಯಾಚರಣೆ ಮಾಡಿ ಬಳಿಕ ಪ್ರದೀಪ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.