ಕುಂಬಳೆ, ಅ 28 (DaijiworldNews/MS): ಪುತ್ತಿಗೆ ಗ್ರಾಮ ಪಂಚಾಯತಿನ ಬಾಡೂರು ಚಾಕಟೆಚಾಲ್ ರಾಮಣ್ಣ ಪೂಜಾರಿ ಎಂಬವರ ಪುತ್ರ ಪ್ರವೀಣ್ ಕುಮಾರ್ ಸಿ.ಎಚ್ (32) ಎಂಬಾತನನ್ನು ತಂಡವೊಂದು ಶುಕ್ರವಾರ ರಾತ್ರಿ ಬೆದರಿಸಿ ಕರೆದೊಯ್ದಿದ್ದು ಈವರೆಗೆ ಮರಳಿ ಮನೆಗೆ ಬಂದಿಲ್ಲ ಎಂದು ತಾಯಿ ದೂರು ನೀಡಿದ್ದಾರೆ.
ಬಾಡೂರಿನ ಪ್ರವೀಣ್ ನೆಲ್ಲಿಕಟ್ಟೆಯ ಅನ್ಯಮತೀಯರ ಮಾಲೀಕರೋರ್ವರ ಪೆಟ್ರೋಲ್ ಪಂಪ್ ಒಂದರಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮ್ಯಾನೇಜರ್ ಆಗಿ ದುಡಿಯುತ್ತಿದ್ದರು. ಮಧ್ಯಮ ವರ್ಗದ ಪ್ರವೀಣ್ ಕುಮಾರ್ ಗೆ ಐಷಾರಾಮಿ ಜೀವನದ ಆಮಿಷವೊಡ್ಡಿ ಮತಾಂತರಕ್ಕೆ ಒಯ್ದಿರುವ ಶಂಕೆ ಮೂಡಿದೆ. ಈತನಿಗೆ ಕಾರು ಸ್ಕೂರ್ಇ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ನೀಡಿ ಮತಾಂತರಗೊಳಿಸಿರುವುದಾಗಿ ತಿಳಿದುಬಂದಿದೆ. ಈತನ ಮನೆಯ ಕೋಣೆಯೊಂದಕ್ಕೆ ಎಸಿ ಅಳವಡಿ ಅದರೊಳಗೆ ನಮಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕೋಣೆಯೊಳಗೆ ಕುರಾನ್ , ಸುಗಂಧದ್ರವ್ಯಗಳು ಪತ್ತೆಯಾಗಿವೆ.
ಶುಕ್ರವಾರದಿಂದ ಮನೆಯಿಂದ ರಾತ್ರೋ ರಾತ್ರಿ ಮನೆಯವರನ್ನು ಬೆದರಿಸಿ ತಂಡ ಕೊಂಡೊಯ್ದ ಪ್ರವೀಣ್ ಪೂಜಾರಿಯನ್ನು ಇದುವರೆಗೂ ಪೊಲೀಸರಿಗೆ ಪತ್ತೆಹಚ್ಚಲಾಗಿಲ್ಲ. ಬಿಳಿ ಕಾರಿನಲ್ಲಿ ಬಂದ ನಾಲ್ವರ ತಂಡ ಅಪಹರಿಸಿರಿದ್ದು ಇದರಲ್ಲಿ ಒಬ್ಬಾತ ಹಳದಿ ಟೀಶರ್ಟ್ ಧರಿಸಿದ್ದು ಮಲೆಯಾಳಂ ಭಾಷೆ ಮಾತನಾಡಿ ಬೆದರಿಸಿದ್ದ ಎಂದು ಯುವಕನ ತಾಯಿ 60 ವರ್ಷದ ಪ್ರೇಮ ಪೂಜಾರಿ ಇದೀಗ ಮಗನ ನಾಪತ್ತೆಯಿಂದ ದುಃಖಿತರಾಗಿ ಬದಿಯಡ್ಕ ಠಾಣೆಗೆ ದೂರು ನೀಡಿದ್ದಾರೆ.