ಮಂಗಳೂರು, ಅ.27 (DaijiworldNews/PY): ಕೊಂಚಾಡಿ ಶ್ರೀರಾಮ ಭಜನಾ ಮಂದಿರ (ರಿ) ಪುನರ್ ನಿರ್ಮಿಸಲ್ಪಡುವ ಶ್ರೀರಾಮ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಅ.27ರ ಬುಧವಾರದಂದು ನಡೆಯಿತು.
ಶರತ್ ಭಟ್ ಮಂದಾರಬೈಲು ಇವರ ಪೌರೋಹಿತ್ಯದಲ್ಲಿ ಮಂದಿರದ ಸ್ಥಾಪಕ ಸದಸ್ಯ ಸೇಸಪ್ಪ ದೇವಾಡಿಗ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರ ಪ್ರೇಮಾನಂದ ಶೆಟ್ಟಿ, ಶಾಸಕ ಭರತ್ ವೈ ಶೆಟ್ಟಿ, ಕಾರ್ಪೊರೇಟರ್ ರಂಜಿನಿ ಎಲ್ ಕೋಟ್ಯಾನ್, ಸೋಮಯಾಜಿ ಎಸ್ಟೇಟ್ ನಿರ್ದೇಶಕ ಬಿ ಆರ್ ಸೋಮಯಾಜಿ, ಗಣೇಶ್ ಬಾಳಿಗ ಶಿಲಾನ್ಯಾಸ ಸಮಾರಂಭಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷ ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲೋಕಾನಂದ ಆರ್ಯ, ಅಧ್ಯಕ್ಷ ರಾಜೇಶ್ ಕೆ., ಕಾರ್ಯಧ್ಯಕ್ಷ ಸೂರಜ್ ಕೋಟ್ಯಾನ್, ಕಾರ್ಯದರ್ಶಿ ಸದಾಶಿವ ಉಪಸ್ಥಿತರಿದ್ದರು.
ಸುರೇಶ್ ಶೆಟ್ಟಿ ಪ್ರಾರ್ಥಿಸಿದರು, ಮಂದಿರದ ಕಾರ್ಯದರ್ಶಿ ದಾಮೋದರ ಕರ್ಕೇರ ವಂದಿಸಿದರು, ಸೀತರಾಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.