ಬಂಟ್ವಾಳ, ಅ 27(DaijiworldNews/MS): ಬಿಜೆಪಿ ಮುಖಂಡ ಬೆಳ್ಳೂರಿನ ಪ್ರಕಾಶ್ ಅವರ ನಿವಾಸಕ್ಕೆ ಅಕ್ಟೋಬರ್ 26 ರ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬಲವಂತವಾಗಿ ನುಗ್ಗಿ ಹಲ್ಲೆ ನಡೆಸಿದ್ದು, ಪ್ರಸ್ತುತ ಅವರು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಪ್ರಕಾಶ್ ಅವರ ತಲೆಗೆ ಗಾಯವಾಗಿತ್ತು. ದಾಳಿಗೆ ಕಾರಣ ತಿಳಿದುಬಂದಿಲ್ಲ. ದಾಳಿಯಲ್ಲಿ ಸ್ಥಳೀಯರೇ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದಾಳಿ ವೇಳೆ ತಡೆಯಲು ಬಂದ ತಾಯಿ ಹಾಗೂ ಅಣ್ಣನಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ರಾತ್ರಿ ವೇಳೆ ನಿತಿನ್ ಬಡಗಬೆಳ್ಳೂರು, ನಿಶಾಂತ್ ಬಡಗಬೆಳ್ಳೂರು ಮತ್ತು ಪವನ್ ಕುಮ್ಡೆಲ್ ಅವರೇ ಪ್ರಕಾಶ್ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಕಾರಣಗಳಿಂದ ದಾಳಿ ನಡೆದಿರುವ ಸಾಶ್ಯತೆ ಇದ್ದು , ಸ್ಥಳದಲ್ಲಿ ಹಲವರು ಜಮಾಯಿಸಿದ್ದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಂಟ್ವಾಳ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.