ಕಾಸರಗೋಡು, ಅ.26 (DaijiworldNews/HR): ಪ್ರಯಾಣ ದರ ಏರಿಕೆಗೆ ಒತ್ತಾಯಿಸಿ ನವಂಬರ್ 9 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕೇರಳ ಖಾಸಗಿ ಬಸ್ಸು ಮಾಲಕರು ತೀರ್ಮಾನಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಡೀಸೆಲ್ ಸೇರಿದಂತೆ ಇಂಧನ ಬೆಲೆ ಏರಿಕೆಯಿಂದ ಉದ್ಯಮ ನಷ್ಟದಲ್ಲಿದ್ದು, ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದ ಸ್ಥಿತಿ ತಲೆ ತಲೆದೋರಿದೆ. ಈ ಹಿನ್ನಲೆಯಲ್ಲಿ ಕನಿಷ್ಠ ಪ್ರಯಾಣ ದರವನ್ನು 12 ರೂ .ಗೆ ಹೆಚ್ಚಿಸಬೇಕು ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಆರು ರೂ .ಗೆ ಏರಿಕೆ ಮಾಡಬೇಕು ಮೊದಲಾದ ಹಲವು ಬೇಡಿಕೆಗ ಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
2018 ರಲ್ಲಿ ಕೊನೆಯದಾಗಿ ಪ್ರಯಾಣ ದರ ಪರಿಷ್ಕರಿಸಿತ್ತು. ಬಳಿಕ ಡೀಸೆಲ್ ದರ ಲೀಟರ್ ಗೆ 40 ರೂ.ಗೂ ಅಧಿಕವಾಗಿತ್ತು. ಈಗಿನ ಸ್ಥಿತಿಯಲ್ಲಿ ಉದ್ಯಮ ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಮಾಲಕರು ತಿಳಿಸಿದ್ದಾರೆ.