ಉದ್ಯಾವರ, ಅ.26 (DaijiworldNews/HR): ಉದ್ಯಾವರ ಗ್ರಾಮ ಪಂಚಾಯತ್ಗೆ ಸೇರಿದ ಕಟ್ಟಡದೊಳಗೆ ಕಳೆದ ಎರಡು ತಿಂಗಳಿಂದ ಕಸ ವಿಲೇವಾರಿಯಾಗದೆ ಕೊಳೆತು ನಾರುತ್ತಿದ್ದು, ಪಂಚಾಯತ್ನ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಂಚಾಯತ್ ಪಕ್ಕದಲ್ಲೇ ಅಂಗನವಾಡಿ ಶಾಲೆ ಇದ್ದರೂ ಸಮಸ್ಯೆಯನ್ನು ತೀರಾ ಕಡೆಗಣನೆ ಮಾಡಲಾಗಿದ್ದು, ಅಂಗನವಾಡಿ ಸಿಬ್ಬಂದಿಗಳಿಗೆ ಸೊಳ್ಳೆ ನೊಣದ ಕಾಟದಿಂದ ವಾಸನೆಯಿಂದ ಊಟ ಸೇವಿಸಲು ಆಗುತ್ತಿಲ್ಲ ಎಂದು ಶಾಲೆಯ ಸಿಬ್ಬಂದಿಯ ಅಳಲು ತೊಡಿಕೊಂಡಿದ್ದಾರೆ.
ಈ ಸಮಸ್ಯೆ ಪರಿಹಾರಕ್ಕೆ ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಲಾಗಿದ್ದರೂ ಇತ್ತ ಕಡೆ ಯಾವುದೇ ಅಧಿಕಾರಿಗಳು ಮುಖ ಮಾಡದೇ ನಿರ್ಲಕ್ಷ್ಯ ತೋರಿದ್ದಾರೆಂದು ಸಾರವಜನಿಕರು ದೂರಿದ್ದಾರೆ.
ಇನ್ನು ಈ ಹಿಂದೆ ಅಲೆವೂರು ಡಂಪಿಂಗ್ ಯಾರ್ಡ್ಗೆ ಕಸ ಹಾಕುತ್ತಿದ್ದು ಕಳೆದ ಎರಡು ತಿಂಗಳಿನಿಂದ ಕಸ ವಿಲೇವಾರಿ ನಿಂತಿದ್ದು ಈಗ ಸಮಸ್ಯೆ ಗೆ ಕಾರಣವಾಗಿದೆ.