ಕಾರ್ಕಳ, ಅ.25 (DaijiworldNews/PY): ಅಕ್ಟೋಬರ್ 21ರಿಂದ 24ರ ತನಕ ಡೆನ್ಮಾರ್ಕ್ನಲ್ಲಿ ನಡೆದ ವಿಶ್ವ ಮಟ್ಟದ 19 ವರ್ಷದೊಳಗಿನ ಜೂನಿಯರ್ ವಿಭಾಗದ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಕಾರ್ಕಳದ ಆಯುಷ್ ಶೆಟ್ಟಿ ಚಿನ್ನದ ಪದಕ ಗಳಿಸಿದ್ದಾರೆ.
ಆಯುಷ್ ಶೆಟ್ಟಿ ಕಾರ್ಕಳ ತಾಲೂಕಿನ ಸಾಣೂರು ಮುರತ್ತಂಗಡಿಯ ರಾಮ್ಪ್ರಕಾಶ್ ಶೆಟ್ಟಿ ಹಾಗೂ ಶಾಲ್ಮಿಲಿ ದಂಪತಿ ಪುತ್ರ.