ಕಾರ್ಕಳ, ಅ.25 (DaijiworldNews/PY): ಕಾರ್ಕಳ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇಲಾಖಾ ಪ್ರಗತಿಯನ್ನು ನಿಗಧಿತ ಅವಧಿಯೊಳಗೆ ಅನುಷ್ಠಾನಿಸುವಂತೆ ಕಾರ್ಕಳ ತಾಲೂಕು ಪಂಚಾಯತ್ನ ಆಡಳಿತಾಧಿಕಾರಿಯಾಗಿರುವ ಜಿಲ್ಲಾ ನಗರಾಠಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಆರ್. ಸೂಚನೆ ನೀಡಿದರು.
ಕಾರ್ಕಳ ತಾಲೂಕು ಪಂಚಾಯತ್ನ ಮೇಜರ್ ಉಣ್ಣಿಕೃಷ್ಣನ್ ಸಭಾಂಗಣದಲ್ಲಿ ಜರುಗಿದ್ದ ಸಾಮಾನ್ಯ ಸಭೆಯು ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಆಕ್ಸಿಜನ್ ಘಟಕ ಹಾಗೂ ಕಾರ್ಕಳ ತಾಲೂಕಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಅವರೊಂದಿಗೆ ಚರ್ಚಿಸಲಾಯಿತು. ಪ್ರಸ್ತುತ ಕಾರ್ಕಳ ತಾಲೂಕಿನಲ್ಲಿ ಕೇವಲ 7 ಪ್ರಕರಣಗಳು ಇರುವುದಾಗಿ ತಾಲೂಕು ಆರೋಗ್ಯ ಅಧಿಕಾರಿಯವರು ಆಡಳಿತಾಧಿಕಾರಿಯವರ ಗಮನಕ್ಕೆ ತಂದರು.
ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಪ.ಜಾತಿ/ಪ.ವರ್ಗದ ಮೆಟ್ರಿಕ್ ಪೂರ್ವ ಬಾಲಕರ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಸಾಮಾಗ್ರಿಗಳ ಖರೀದಿ ಬೇಡಿಕೆ ಪಟ್ಟಿ ಅನುಮೋದಿಸಲಾಯಿತು. ಸಮಾಜ ಕಲ್ಯಾಣ ಇಲಾಖಾ ವತಿಯಿಂದ 2021-22ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಸ್ಮಾರ್ಟ್ ಕ್ಲಾಸ್ ನಿರ್ವಹಣೆಗಾಗಿ ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್ ಖರೀದಿ ದರಪಟ್ಟಿ ಅನುಮೋದನೆ.
2021-22ನೇ ಸಾಲಿನ ಸಹಕಾರ ಇಲಾಖೆಯ ಕಾರ್ಕಳ ತಾಲೂಕು ಪಂಚಾಯತ್ ಯೋಜನೆಯ ಫಲಾನುಭವಿಗಳ ಪಟ್ಟಿಗೆ ಅನುಮೋದನೆ. ರೇಷ್ಮೆ ಇಲಾಖೆಯ 2021-22ನೇ ಸಾಲಿನ ಗಿರಿಜನ ಉಪಯೋಜನೆಯಡಿ ರೇಷ್ಮೆ ಹುಳು ಸಾಕಾಣಿಕೆ ಸ್ಟ್ಯಾಂಡ್ ತಯಾರಿಕೆ ದರಪಟ್ಟಿ ನಿಗದಿ ಪಡಿಸಲಾಯಿತು. ರೇಷ್ಮೆ ಇಲಾಖೆಯ 2021-22ನೇ ಸಾಲಿನ ಗಿರಿಜನ ಉಪಯೋಜನೆ ಕಾರ್ಯಕ್ರಮದ ಕ್ರಿಯಾಯೋಜನೆ ಮಂಡಿಸಲಾಯಿತು. ಹಿಂದುಳಿದ ವರ್ಗಗಳ ಇಲಾಖಾ ಕಛೇರಿಗೆ ಜೆರಾಕ್ಸ್ ಮಿಷಿನ್ ಖರೀದಿಗೆ ದರಪಟ್ಟಿ ನೀಡಲಾಯಿತು. ಹಿಂದುಳಿದ ವರ್ಗಗಳ ಇಲಾಖಾ 2021-22ನೇ ಸಾಲಿನ ಪರಿಷ್ಕೃತಗೊಳಿಸಲಾಯಿತು.
ಸ್ಥಳೀಯ ಯೋಜನಾ ಪ್ರದೇಶದ ಹೊರಗಡೆ ಇರುವ ಭೂಪರಿವರ್ತನಾ ಸ್ಥಳಗಳಲ್ಲಿನ ಏಕ/ಬಹು ವಿನ್ಯಾಸದ ಪ್ರಸ್ತಾವನೆಗಳಿಗೆ ಅನುಮೋದನೆ. 2020-21ನೇ ಸಾಲಿನ ಗ್ರಾ.ಪಂ ಹಾಗೂ ತಾ.ಪಂನ ಜಮಾಬಂಧಿ ವರದಿಯನ್ನು ಅನುಮೋದನೆ ನೀಡಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿರಾಜ್ ಹೆಚ್ ಅವರು ವರ್ಗಾವಣೆ ಸ್ಥಳ ನಿಯುಕ್ತಿಗೊಳಿಸಿದ ಆದೇಶದ ವಿರುದ್ಧ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿದ ಅರ್ಜಿಯ ಕುರಿತು ವಾದ ಮಂಡಿಸಲು ಬೆಂಗಳೂರಿನ ವಕೀಲ ಆಶೋಕ್ ಎನ್ ನಾಯಕ್ ಅವರನ್ನು ಕಾರ್ಯನಿರ್ವಹಣಾಧಿಕಾರಿಯವರ ಪರವಾಗಿ ನ್ಯಾಯ ಮಂಡಳಿಯಲ್ಲಿ ವಾದ ಮಂಡಿಸುವ ಕುರಿತು ಚರ್ಚಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕಿ ಹಾಗೂ ಗೋಧಿ ಸರಬರಾಜು ಮಾಡಿದ, ಪ್ಲಾಸ್ಟಿಕ್ ಗೋಣಿ ಚೀಲ ವಿಲೇವಾರಿ, ಅಂಗನವಾಡಿ ಕೇಂದ್ರಗಳ ತೂಕದ ಸಾಧನಗಳನ್ನು ದುರಸ್ಥಿ ಪಡಿಸುವ ಬಗ್ಗೆ ದರ ಪಟ್ಟಿ ನಿಗದಿಪಡಿಸಲಾಯಿತು.
2021-22ನೇ ಸಾಲಿನ ಕೃಷಿ ಇಲಾಖೆಗೆ ಸಂಬಂಧಿಸಿದ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಪವರ್ ಟಿಲ್ಲರ್ ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿ ಅನುಮೋದನೆ ನೀಡಲಾಯಿತು.
ತಾಲೂಕು ಪಂಚಾಯತ್ ಕಾಯ್ನಿರ್ವಹಣಾಧಿಕಾರಿ ಗುರುದತ್ ಎಂ.ಎನ್, ಲೆಕ್ಕಶಾಖಾ ಮುಖ್ಯಸ್ಥ ನಿತೀನ್ ವರದಿ ವಾಚಿಸಿದರು.