ಬಂಟ್ವಾಳ, ಅ. 24 (DaijiworldNews/SM): ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನಸೌಧ ಬಳಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆ ಜಾಥಕ್ಕೆ ರವಿವಾರ ಮಧ್ಯಾಹ್ನ ಚಾಲನೆ ನೀಡಲಾಯಿತು.
ಈ ಸಂದರ್ಭ ಸುದ್ದಿಗಾರರೊಂದೊಗೆ ಮಾತನಾಡಿದ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪ. ಜಾತಿ ,ಪಂಗಡದವರ ಮತ್ತು ಇತರ ಸಮುದಾಯದ ಕಲೋನಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ 'ರಸ್ತೆ ಸಂಪರ್ಕ ಸಹಿತ ಇತರ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಈ ಕಾಲ್ನಡಿಗೆ ಜಾಥ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ನಮ್ಮ ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ನೀಡಲಾಗುವುದು, ನಮ್ಮ ಯಾವ ಬೇಡಿಕೆಗೂ ಜಿಲ್ಲಾಧಿಕಾರಿಯಾಗಲಿ,ಜಿಲ್ಲೆಯ ಜನಪ್ರತಿನಿಧಿಗಳ್ಯಾರು ಈವರೆಗೂ ಸ್ಪಂದಿಸದಿದ್ದು, ಈ ಪ್ರತಿಭಟನೆಗೂ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಮುಂಬರುವ ತಾ.ಪಂ,ಜಿಪಂ.ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೆವೆ ಎಂದರು.
ಸಮಿತಿ ಪ್ರಮುಖರಾದ ನಾಗೇಶ್ ಮಂಜನಾಡಿ,ಶ್ರೀಧರ ಮಂಜನಾಡಿ,ಸಂಜೀವ ಹೆಗ್ಗಡೆಕೋಡಿ, ಮಂಜನಾಡಿ ಸಂಜೀವ ಹೆಗಡಕೋಡಿ ಜಗದೀಶ್ ಮಂಜನಾಡಿ, ಎಂಆರ್.ಗೋಪಾಲ್ ಸಹಿತ ಐವತ್ತಕ್ಕು ಹೆಚ್ಚು ಮಂದಿ ಕಾಲ್ನಡಿಗೆ ಜಾಥದಲ್ಲಿದ್ದರು.