ಮಂಗಳೂರು, ಅ. 24 (DaijiworldNews/SM): ಕರ್ನಾಟಕ ದಕ್ಷಿಣ ಪ್ರಾಂತ್ಯದ ಬೋಧಕ ಹಾಗೂ ಬಲ್ಮಠದಲ್ಲಿರುವ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರೆ. ಡಾ. ಹನಿಬಾಲ್ ರಿಚಾರ್ಡ್ ಕಬ್ರಾಲ್(66) ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1976ರಲ್ಲಿ ಧರ್ಮಗುರುಗಳ ದೀಕ್ಷೆ ಹಾಗೂ 1980ರಲ್ಲಿ ಬೋಧಕರಾಗಿ ದೀಕ್ಷೆ ಪಡೆದು ಪ್ರಥಮವಾಗಿ ತರಿಕೆರೆ ಚರ್ಚ್ ನಲ್ಲಿ ಸೇವೆಗೆ ಸೇರ್ಪಡೆಗೊಂಡರು. ಮಂಗಳೂರು ವೈಎಂಸಿಎಯ ಅಧ್ಯಕ್ಷರಾಗಿದ್ದರು. ಹಲವು ವರ್ಷಗಳ ಕಾಲ ಪ್ರಾಧ್ಯಪಕರಾಗಿದ್ದ ಅವರು, 2009ರಲ್ಲಿ ಥಿಯೊಲಾಜಿಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ೧೧ ವರ್ಷ ಸೇವೆ ನೀಡಿದ್ದಾರೆ.
ಶಿಕ್ಷಣ ಕ್ಷೇತ್ರ, ಸಂಗೀತ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಸಂಪಾದಿಸಿದ್ದರು.