ಉಡುಪಿ, ಅ. 24 (DaijiworldNews/SM): ಸಂತೆಕಟ್ಟೆಯಲ್ಲಿ ಪ್ರಸ್ತಾವಿತ ಮೇಲ್ಸೆತುವೆಯ ನಿರ್ಮಾಣದ ಕುರಿತಾಗಿ ಹಾಗೂ ಸಂತೆಕಟ್ಟೆಯ ಟ್ರಾಫಿಕ್ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಲು ಸಮಾನ ಮನಸ್ಕರ ಸಭೆಯು ರವಿವಾರದಂದು ನಡೆಯಿತು.
ಸಭೆಯ ಮುಂದಾಳತ್ವವನ್ನು ಸಾಮಾಜಿಕ ರ್ಯಕರ್ತರಾದ ಜೊಸೆಫ್ ರೆಬೆಲ್ಲೊ, ನವಿನ್ ಮತ್ತು ಇತರರು ವಹಿಸಿದ್ದರು. ಸಭೆಯಲ್ಲಿ ಸದಾ ಟ್ರಾಫಿಕ್ ಜಾಮ್ ಸಮಸ್ಯೆ ಇರುವ ಸಂತೆಕಟ್ಟೆ ಜಂಕ್ಷನ್ ಇಲ್ಲಿನ ಪರಿಹಾರ ಕ್ಕಾಗಿ ಸೇತುವೆ ನಿರ್ಮಾಣ ಕಾರ್ಯ ಕ್ಕೆ ರಾಜಕೀಯ ಮುಖಂಡರು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹಾಗೂ ಉಡುಪಿ ಶಾಸಕರು ರಘುಪತಿ ಭಟ್ ಹಾಗೂ ಅನುದಾನ ತರಿಸುವಲ್ಲಿ ಶ್ರಮಿಸಿದ ಸಂಭಂದಿತರಿಗೆ ಅಭಿನಂದಿಸಲಾಯಿತು.
ಈಗ ಆಗುವ ಟ್ರಾಫಿಕ್ ಬ್ಲಾಕ್ ಸಮಸ್ಯೆ ಗೆ ತುರ್ತಾಗಿ ಒಂದೇ ಕಡೆ ಇರುವ ಬಸ್ಸು ನಿಲ್ದಾಣವನ್ನು ಹಂಚಿ ಹಾಕುವುದಲ್ಲಿ ತುಂಬಾ ಅನುಕೂಲ ಇದ್ದು. ಕೆಮ್ಮಣ್ಣು ಹೂಡೆ ಹೋಗುವ ಬಸ್ಸು ಸಂತೆಕಟ್ಟೆ ಯ ಕೆಮ್ಮಣ್ಣು ತಿರುವಿನಲ್ಲ ಮಾಡುವುದು. ಕೊಳಲಗಿರಿ ಬ್ರಹ್ಮಾವರ ಕುಂದಾಪುರ ಕಡೆ ಹೊಗುವ ಬಸ್ಸುಗಳನ್ನು ಈಗ ಇರುವ ಶೌಚಲಯ ದಿಂದ ಇನ್ನು ಸ್ವಲ್ಪ ಮುಂದಕ್ಕೆ ಮಾಡುವುದು. ಉಡುಪಿ ಕಡೆ ಸಾಗುವ ಬಸ್ಸುಗಳನ್ನು ಹಳೆ ಜೊನಾತನ್ ಬೇಕರಿ ಇರುವ ಸರ್ವಿಸ್ ರೋಡಲ್ಲಿ ಮಾಡುವುದು. ಲಕ್ಷ್ಮಿ ನಗರ ಮಲ್ಪೆ ಹೋಗುವ ಬಸ್ಸುಗಳನ್ನು ಜಿಎಸ್ ಜೆ ವಸತಿ ಸಮುಚ್ಛಯ ಮುಂಬಾಗದಲ್ಲಿ ಮಾಡುವಂತೆ ಜನಪ್ರತಿನಿಧಿಗಳಿಗೆ ಮನವಿ ನೀಡಲು ತೀರ್ಮಾನಿಸಲಾಯಿತು. ಸಂತೆಕಟ್ಟೆ ಜಂಕ್ಷನ್ ಸೇತುವೆ ನಿರ್ಮಾಣ ಕಾಮಾಗಾರಿ ಆರಂಬಿಸುವ ಮೊದಲು ಅದರ ನೀಲ ನಕ್ಷೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಸಂತೆಕಟ್ಟೆ ಪರಿಸರದಲ್ಲಿ ಹಾಕಬೇಕಾಗಿ ಕೋರಿಕೆಯನ್ನು ಮುಂದಿಟ್ಟರು.
ಜನ ಪ್ರತಿನಿಧಿಗಳು ಸಂತೆಕಟ್ಟೆ ಅಭಿವೃದ್ಧಿ ಯ ರೂಪುರೇಷೆಯನ್ನು ಕಾರ್ಯಾರಂಭದ ಮೊದಲು ನಾಗರಿಕರ ಕಾತುರದಲ್ಲಿದ್ದು ಸೇತುವೆಯ ಬಗ್ಗೆ ತೊಂದರೇ ಅಗದಂತೆ ಜನಪ್ರತಿನಿಧಿಗಳು ವಿಶೇಷ ಕಾಳಜಿ ವಹಿಸಿ ಅಗತ್ಯ ವಿದ್ದಲ್ಲಿ ತಿದ್ದುಪಡಿ ಮಾಡಿಸಿ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುವಂತೆ ಕೊಡಬೇಕು ಹಾಗೂ ಅಂಬಾಗಿಲು ನಿಂದ ಕೆಜಿ ರೋಡ್ ಸೇತುವೆ ವರೆಗೆ ಎರಡೂ ಬದಿಯ ಸರ್ವಿಸ್ ರೊಡ್ ಗಳನ್ನು ಅಗಲೀಕರಣ ಮತ್ತು ವಿಸ್ತಾರ ಮುಂದುವರೆಸಿ ಕೊಡಬೇಕು ಎಂದು ಮನವಿ ಮಾಡಲು ನಿರ್ಧರಿಸಲಾಯಿತು.