ಉಡುಪಿ, ಅ.23 (DaijiworldNews/HR): ಕೊರೊನಾದಿಂದಾಗಿ ಮಾರ್ಚ್ 22, 2020 ರಿಂದ ಭಾರತದಾದ್ಯಂತ ಪ್ಯಾಸೆಂಜರ್ ರೈಲುಗಳ ಸಂಚಾರ ಸ್ಥಗಿತಗೊಂಡಿತು. ಇದರಿಂದ ಜನಸಾಮಾನ್ಯರು ಹಾಗೂ ಕಾರ್ಮಿಕರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ.
ಸ್ಥಳೀಯ ರೈಲುಗಳು ಕಳೆದ 18 ತಿಂಗಳುಗಳಿಂದ ಚಲಿಸುತ್ತಿಲ್ಲ. ಬಹುತೇಕ ರೈಲುಗಳು ಎಕ್ಸ್ಪ್ರೆಸ್ ರೈಲುಗಳಾಗಿ ಮಾರ್ಪಾಡಾಗಿದ್ದು, ಟಿಕೆಟ್ ದರಗಳು ತೀವ್ರವಾಗಿ ಏರಿವೆ. ಈಗಾಗಲೇ ಸಂಕಷ್ಟದಲ್ಲಿರುವ ಬಡ ಜನರು ರೈಲ್ವೇ ದರವನ್ನು ಪೂರೈಸುವ ಎತ್ತರದ ಕೆಲಸವನ್ನು ಎದುರಿಸುತ್ತಿದ್ದಾರೆ. ಇದಲ್ಲದೆ, ಟಿಕೆಟ್ಗಳನ್ನು ಕಡ್ಡಾಯವಾಗಿ ಮುಂಚಿತವಾಗಿ ಕಾಯ್ದಿರಿಸಬೇಕು. ಹಾಗಾಗಿ ಎಕ್ಸ್ಪ್ರೆಸ್ ರೈಲುಗಳಲ್ಲಿ ಸಂಚರಿಸಲು ಸಾಮಾನ್ಯ ವರ್ಗದವರಿಗೆ ಕಷ್ಟ ಉಂಟಾಗಿದೆ.
ಕೊರೊನಾ ನಂತರ ಭಟ್ಕಳದಿಂದ ಉಡುಪಿಗೆ ರೈಲು ದರ 92 ರೂ. ಆಗಿದ್ದು, ಈಗಾಗಲೇ ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ವಿನಂತಿಯನ್ನು ಪತ್ರದ ಮೂಲಕ ಮಾಡಲಾಗಿದೆ.
ಇನ್ನು ಟಿಕೆಟ್ಗಳನ್ನು ಕಾಯ್ದಿರಿಸುವುದರಿಂದ ಪ್ರಯಾಣಿಕರ ಸಂಖ್ಯೆ ತಿಳಿಯುತ್ತದೆ ಮತ್ತು ಯಾವುದೇ ಕೋವಿಡ್ ರೋಗಿಯಿದ್ದರೆ ಆತನ ಪ್ರಾಥಮಿಕ ಸಂಪರ್ಕಗಳನ್ನು ಸುಲಭವಾಗಿ ಕಾಣಬಹುದು ಎಂದು ರೈಲ್ವೆ ಅಧಿಕಾರಿಗಳು ಈ ನಿಯಮಯನ್ನು ಜಾರಿಗೊಳಿಸಿದ್ದಾರೆ.