ಕಾರ್ಕಳ, ಅ.22 (DaijiworldNews/HR): ಬ್ಯಾಟರಿ ಚಾಲಿತ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಬಲಗಾಲಿನ ಮೂಳೆ ಮುರಿತಕ್ಕೊಳಗಾದ ಘಟನೆ ಮಿಯಾರು ಎಂಬಲ್ಲಿ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಮಿಯಾರು ಮರಲ್ದಬೆಟ್ಟುವಿನ ಸುರೇಶ್ ದೇವಾಡಿಗ(47) ಗಾಯಾಳು.
ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಗ್ಲೋರಿಯಸ್ ಆಯಿಲ್ ಮಿಲ್ ಬಳಿ ರಸ್ತೆಯನ್ನು ದಾಟಲು ಸುರೇಶ್ ದೇವಾಡಿಗ ನಿಂತಿರುವಾಗ ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ರಸ್ತೆಯ ತೀರ ಎಡಬದಿಗೆ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಸುರೇಶ್ ದೇವಾಡಿಗ ಡಾಂಬರು ರಸ್ತೆಗೆ ಬಿದ್ದು ಬಲಗಾಲಿನ ಮೂಳೆ ಮುರಿತಗೊಳಗಾಗಿ ಎಡಕಾಲು, ಎಡಕೈ, ಹಣೆಗೆ, ಮೂಗಿನ ಬಳಿ ತರಚಿದ ರಕ್ತ ಗಾಯವಾಗಿರುತ್ತದೆ.
ನೋಂದಣಿ ನಂಬರ್ನ್ನು ಹೊಂದಿಲ್ಲದ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನದ ಸವಾರ ಕಿಶನ್ ವಿರುದ್ಧ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.