ಉಡುಪಿ, ಅ.22 (DaijiworldNews/HR): ಕುಂದಾಪುರ ಮತ್ತು ಉಡುಪಿ ನಡುವೆ ಸಂಚರಿಸುವ ಖಾಸಗಿ ಬಸ್ನಲ್ಲಿ ಬೆಳೆಬಾಳುವ ಚಿನ್ನಾಭರಣಗಳನ್ನು ಸಿಕ್ಕಿದ ಕೂಡಲೇ ವಾರಸುದಾರರಿಗೆ ತಲುಪಿಸುವ ಮೂಲಕ ಬಸ್ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ರಮೇಶ್ ಕುಂದಾಪುರ ಅವರು ಉಡುಪಿ ನಡುವೆ ಸಂಚರಿಸುವ 'ಶ್ರೇಯಸ್' ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದದು, ಅವರು ಕುಂದಾಪುರದಲ್ಲಿ ಬಸ್ ಹತ್ತಿ ತೆಕ್ಕಟ್ಟೆಯಲ್ಲಿ ಇಳಿಯುವಾಗ, ಎರಡು ಚಿನ್ನದ ಮಂಗಲಸೂತ್ರ ಮತ್ತು ಇತರ ಕೆಲವು ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ತನ್ನ ಬ್ಯಾಗ್ ಅನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದು, ಇದನ್ನು ಬಸ್ ನಿರ್ವಾಹಕ ಗೋಪಾಲ್ ನೋಡಿ ಬಸ್ ಚಾಲಕ ಪ್ರತಾಪ ಶೆಟ್ಟಿಗೆ ತಿಳಿಸಿದರು.
ಇನ್ನು ಅದೇ ಬಸ್ಸಿನಲ್ಲಿ ಕೋಟ ಪೊಲೀಸ್ ಠಾಣೆಯ ಪೋಲಿಸ್ ಸಿಬ್ಬಂದಿ ವಿಕ್ರಮ್ ಎಂಬವರು ಪ್ರಯಾಣಿಸುತ್ತಿದ್ದು, ಅದನ್ನು ಬಸ್ ಸಿಬ್ಬಂದಿ ಪೊಲೀಸ್ ಸಿಬ್ಬಂದಿಯಲ್ಲಿ ಕೊಟ್ಟು ಬಳಿಕ ವಾಟ್ಸಾಪ್ ಸಂದೇಶದ ಮೂಲಕ ಈ ವಿಷಯವನ್ನು ಪ್ರಸಾರ ಮಾಡಲಾಯಿತು. ಬಳಿಕ ರಮೇಶ್ ಕೋಟ ಪೊಲೀಸ್ ಠಾಣೆಗೆ ಹೋಗಿ ಪರಿಶೀಲಿಸಿ ಚಿನ್ನಾಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಕುರಿತು ದೈಜಿವರ್ಲ್ಡ್ನೊಂದಿಗೆ ಮಾತನಾಡಿದ ಕಾನ್ಸ್ಟೇಬಲ್ ವಿಕ್ರಮ್, "ರಮೇಶ್ ಕುಂದಾಪುರ ಎಂಬವರು ಬಸ್ಸಿನಲ್ಲಿ ಬೆಳೆಬಾಳುವ ಚಿನ್ನಾಭರಣಗಳನ್ನು ಮರೆತಿದ್ದು, ಅದೃಷ್ಟವಶಾತ್, ನಾನು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. ಬಸ್ಸಿನ ಸಿಬ್ಬಂದಿ ನನಗೆ ಬೆಲೆಬಾಳುವ ವಸ್ತುಗಳನ್ನು ಹಸ್ತಾಂತರಿಸಿದರು. ಬೆಲೆಬಾಳುವ ವಸ್ತುಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಇನ್ನು ಬಸ್ ಸಿಬ್ಬಂದಿಗಳಾದ ಪ್ರತಾಪ ಶೆಟ್ಟಿ, ಗೋಪಾಲ್ ಶೆಟ್ಟಿ ಮತ್ತು ಪೊಲೀಸ್ ಸಿಬ್ಬಂದಿ ವಿಕ್ರಮ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.