ಉಡುಪಿ, ಅ. 20 (DaijiworldNews/SM): ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ರಕ್ಷಣೆಗೆ ಕೇಂದ್ರ ಸರಕಾರ ಸರಿಯದ ಕ್ರಮವನ್ನು ತೆಗೆದುಕೊಳ್ಳಬೇಕು. ಹಿಂದು ಸಮಾಜ ಮನಸು ಮಾಡಿದರೆ, ಬೇರೆ ದೇಶಗಳಲ್ಲಿ ಅಲ್ಪ ಸಂಖ್ಯಾತ ಹಿಂದುಗಳ ಮನೆ-ಮಠಗಳ ದ್ವಂಸ ಮಾಡುವ ಪರಿಸ್ಥಿತಿ ಎದುರಾದರೆ ನಾವು ಇಲ್ಲಿ ಹಿಂದು ಸಂಘಟನೆಗಳೂ ಕೂಡ ಮನಸ್ಸು ಮಾಡಬೇಕಾಗುತ್ತದೆ. ಅವರನ್ನು ಬಾಂಗ್ಲಾ ದೇಶಕ್ಕೆ ಓಡಿಸುವ ಅನಿವಾರ್ಯತೆ ನಿರ್ಮಾಣ ಆದೀತು. ನಮ್ಮ ಸಹನೆಯನ್ನು ಪರೀಕ್ಷೆ ಮಾಡಬೇಡಿ. ಇದು ಮುಸ್ಲಿಂ ಸಮಾಜಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಭಜರಂಗದಳದ ರಾಜ್ಯ ಸಂಚಲಕ ಸುನಿಲ್ ಕೆ ಆರ್ ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳವು ಬಾಂಗ್ಲ ದೇಶದಲ್ಲಿ ಹಿಂದು ದೇವಾಲಯ ಹಾಗೂ ಹಿಂದು ಮನೆಗಳ ದ್ವಂಸವನ್ನು ಖಂಡಿಸಿ ಅಜ್ಜರಕಾಡುವಿನಲ್ಲಿರುವ ಹುತಾತ್ಮರ ಸ್ಮಾರಕದ ಬಳಿ ಆಯೋಜಿಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಬಾಂಗ್ಲಾದಲ್ಲಿರುವ ಹಿಂದುಗಳ ಆತ್ಮವಿಶ್ವಾಸ ತುಂಬಿಸುವ ಕೆಲಸ ಆಗಬೇಕು. ನಾವು ತ್ಯಾಗದ ಪ್ರತೀಕವಾಗಿ ಕೇಸರಿಯನ್ನು ಧರಿಸಿದ್ದೇವೆ ಬಿಟ್ಟು ಯಾವುದೇ ಕೋಮು ಭಾವನೆಯಿಂದಲ್ಲ. ನಾವು ಕೇವಲ ಸನಾತನ ಧರ್ಮ ಅಂತ ಹೇಳ್ಕೊಂಡು ಯಾವುದೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ಮಾತ್ರ ಸೀಮಿತ ಆಗಿಲ್ಲ. ಅದು ತ್ಯಾಗ, ಧರ್ಮದ ಸಂಕೇತ. ಕೇಸರಿ ಈ ದೇಶದ ಸಂಕೇತವೂ ಹೌದು.
ಕೇಸರಿ ಇಲ್ಲದಿದ್ದರೆ ಸಿದ್ದರಾಮಯ್ಯನವರು ನರಿ ನಾಯಿಗಳಿಗೆ ಸಿಕ್ಕಿ ಬೀದಿ ಪಾಲಾಗ್ತ ಇದ್ರು. ಕೇಸರಿಯನ್ನು ವಿರೋಧಿಸುವ ಸಿದ್ದರಾಮಯ್ಯನವರ ಮುಂದೆ ವಿರೋಧಿಸಿ ನಿಲ್ಲಬೇಕು. ಹಿಂದು ಸಮಾಜ ಕೇಸರಿಯಿಂದಲೇ ಬದುಕಿದೆ. ಕೇಸರಿಯಿಂದಲೇ ದೇಶದ ಸಂಸ್ಕೃತಿ ಉಳಿದಿದೆ.
ಬಾಂಗ್ಲಾ ದೇಶದಲ್ಲಿರುವ ಅಲ್ಪಸಂಖ್ಯಾತರನ್ನು ದೌರ್ಜನ್ಯ ಮಾಡುತ್ತಿದ್ದಾರೆಂದರೆ, ಇಲ್ಲಿಯ ಮುಸಲ್ಮಾನ ಮುಖಂಡರು ಇದನ್ನು ಖಂಡಿಸಬೇಕಿತ್ತು. ಯಾಕೆಂದರೆ ನೀವು ಇಲ್ಲಿ ಅಲ್ಪಸಂಖ್ಯಾತರು. ಈ ದೌರ್ಜನ್ಯಗಳನ್ನ ನಿಮ್ಮ ಅಂತ್ಯಕ್ಕಾಗಿ ಮಾಡುತ್ತಿದ್ದೀರಿ. ಇದೇ ರೀತಿ ಮುಂದುವರಿದರೆ ಇಡೀ ಹಿಂದು ಸಮಾಜ ನಿಮ್ಮ ವಿರುದ್ದ ತೊಡೆ ತಟ್ಟಿ ನಿಲ್ಲುತ್ತದೆ ಎಂದು ಸುನಿಲ್ ಎಚ್ಚರಿಕೆ ನೀಡಿದರು.