ಕಾರ್ಕಳ, ಅ. 20(DaijiworldNews/HR): ಸಿಂದಗಿ, ಹಾನಗಲ್ನಲ್ಲಿ ನಡೆಯುಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರಾ ಹಣಾಹಣಿ ನಡೆಯಲಿದೆ. ಈ ಕ್ಷೇತ್ರಗಳಲ್ಲಿ ಜಾತ್ಯತೀತ ಜನತಾದಳ ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ. ಪಕ್ಷದ ಬಲವರ್ಧನೆಗೆ ಕಾಂಗ್ರೆಸ್ ಮುಖಂಡರು ಸಕ್ರಿಯಾರಾಗಬೇಕೇ ಹೊರತು ಜನತಾದಳ ಮುಖಂಡರ ಹೇಳಿಕೆಯ ತಿರುಗೇಟು ನೀಡಿ ಕಾಲಹರಣ ಮಾಡಬಾರದೆಂದು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.
ಕಾರ್ಕಳದ ಪ್ರವಾಸಿ ಬಂಗಲೆ ಅಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಇಲ್ಲದಿದ್ದ ಮತಾಂತರ, ಗೋಹತ್ಯೆ ವಿವಾದಗಳು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚುತ್ತಿದೆ ಎಂದರೆ ಬಿಜೆಪಿ ಆಡಳಿತದ ವೈಫಲ್ಯವನ್ನು ಎತ್ತಿ ತೋರುತ್ತಿದೆ. ಒಂದೋ ಕೃತಕ ಸೃಷ್ಠಿ ಅಥವಾ ನೈಜತೆ ಇದರೂ ಅದನ್ನು ನಿಗ್ರಹಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ದೂಷಿಸಿದ್ದಾರೆ.
ಭೂಮಸೂದೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ವೀರಪ್ಪ ಮೊಯಿಲಿ ಅವರು ಹೂಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಕಾನೂನು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಅದರಲ್ಲಿ ಶೇ. 99 ವಿವಾದಗಳು ಇತ್ಯರ್ಥಗೊಂಡಿದ್ದು, ಶೇ. 1ಮಾತ್ರ ಬಾಕಿ ಉಳಿದಿತ್ತು. ಆ ಕುರಿತು ಬಿಜೆಪಿಯ ಸರೆಕಾರ ಒಂದೇ ಒಂದು ಸಭೆಯನ್ನು ಆಯೋಜಿಸುವಲ್ಲಿ ವಿಫಲಗೊಂಡಿದೆ ಎಂದ ಅವರು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಮತದಾರರಿಗೆ ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳಬೇಕು. ಆಗಹ ಮಾತ್ರ ಅದಕ್ಕೆ ಸ್ಪಂದಿಸುತ್ತಾರೆ ಎಂದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಕಾರ್ಯಕ್ರಮಗಳು ಇದು ಒಂದೇ ಅಲ್ಲ. ನೂರಾರು ಜನಪರ ಕಾರ್ಯಕ್ರಮಗಳು ಜಾರಿಗೊಳಿಸಿದೆ. ಅವೆಲ್ಲದರ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕಾಗಿರುವುದು ಅಗತ್ಯ ಇದೆ ಎಂದರು.
ಇಂಧನ ಬೆಲೆ ಏರಿಕೆಯು ಕುರಿತು ಮಾತನಮಾಡಿದ ಅವರು ನೇರವಾಗಿದೆ ಜಿಎಸ್ಟಿ ತೆರಿಗೆ ಮಾತ್ರ ವಿಧಿಸಿದಾಗ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಅಗ ಇಂಧನ ಬೆಲೆ ಕಡಿಮೆಗೊಳ್ಳುತ್ತದೆ. ಇತರೆಲ್ಲ ಪರಿಕರಗಳ ಮೇಲೆ ಜಿಎಸ್ಟಿ ತೆರಿಗೆ ವಿಧಿಸಿರುವ ಆಗ ಇಂಧನಕ್ಕೆ ಮಾತ್ರ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಪ್ರತೇಕ ತೆರಿಗೆಯ ಅಗತ್ಯ ಇಲ್ಲ ಅಭಿಮತ ವ್ಯಕ್ತ ಪಡಿಸಿದರು.
ಗಾಂಧಿನಡಿಗೆ ಕಾರ್ಯಕ್ರಮದಡಿಯಲ್ಲಿ ಪಕ್ಷ ಬಲವರ್ಧನೆಗೆ ಕಾಂಗ್ರೆಸ್ ವಿನೂತನ ಕಾರ್ಯಕ್ರಮ ಹಾಕಿಕೊಂಡಿದೆ. ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ಗಳು ಸೇರಿದಂತೆ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರಿದ ಚುಕ್ಕಾಣಿ ಹಿಡಿಯಲಿದೆ ಎಂದು ಇದೇ ಸಂದರ್ಭದಲ್ಲಿ ವೀರಪ್ಪ ಮೊಯಿಲಿ ಭವಿಷ್ಯ ನುಡಿದರು.