ಕಾರ್ಕಳ, ಅ. 20(DaijiworldNews/HR): ವ್ಯಕ್ತಿಯೊಬ್ಬ ಕೆಲವು ಸ್ನೇಹಿತರ ಜೊತೆಗೂಡಿ, ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ಮಾಡಿ ತನ್ನ ಮಗಳನ್ನು ಕರೆದುಕೊಂಡು ಹೋದ ಘಟನೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ
ಎಡು ಗ್ರಾಮದ ಐದು ಸೆಂಟ್ಸ್ ಕಾಲೋನಿಯ ನಿವಾಸಿ ಪ್ರತಿಮಾ ದೇವಾಡಿಗ 2014 ರಲ್ಲಿ ಆನೆಕಲ್ಲು ಮೂಲದ ಕುಮಾರ್ ಅವರನ್ನು ವಿವಾಹವಾಗಿದ್ದರು. ನಂತರ ದಂಪತಿಗಳು ಒಟ್ಟಿಗೆ ವಾಸಿಸುತ್ತಿದ್ದರು ಆದರೆ ಸಣ್ಣಪುಟ್ಟ ವಿಚಾರಗಳಲ್ಲಿ ಅವರು ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ವರದಿಯಾಗಿರುವಂತೆ, ಕುಮಾರ್ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿ ಅವರನ್ನು ಮನೆಯಿಂದ ಹೊದ ಹಾಕಿದ್ದಾನೆ. ಆತನ ವರ್ತಯಿಂದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಅಲಿಮಾರುಗುಡ್ಡೆಯ ಐದು ಸೆಂಟ್ಸ್ ಕಾಲೋನಿಯಲ್ಲಿರುವ ತನ್ನ ತವರು ಮನೆಗೆ ಮರಳಿದ್ದಳು. ಆದರೆ ಆಕೆಯ ಪತಿ ಆಗಾಗ್ಗೆ ಕುಡಿದು ಆಕೆಯ ತವರು ಮನೆಗೂ ಬರುತ್ತಿದ್ದನು ಎನ್ನಲಾಗಿದೆ.
ಇನ್ನು ಕುಮಾರ್ ತನ್ನ ಹೆಂಡತಿಯನ್ನು ಆನೆಕಲ್ಲುಗೆ ಬರುವಂತೆ ಹೇಳುತ್ತಿದ್ದ. ಅಕ್ಟೋಬರ್ 16 ರ ರಾತ್ರಿ, ಅವನು ತನ್ನ ಹೆಂಡತಿಯನ್ನು ಕರೆದು ತನ್ನ ಮಕ್ಕಳೊಂದಿಗೆ ತನ್ನ ಬಳಿಗೆ ಹಿಂತಿರುಗುವಂತೆ ಹೇಳಿದ್ದನು. ಆದರೆ ಅದಕ್ಕೆ ಒಪ್ಪದಿದ್ದಾಗ ಮಕ್ಕಳನ್ನು ಕರೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾನೆ.
ಅಕ್ಟೋಬರ್ 18 ರ ಬೆಳಿಗ್ಗೆ ಕುಮಾರ್ ತನ್ನ ಅತ್ತೆಯ ನಿವಾಸಕ್ಕೆ ಧ್ರುವ್, ವರುಣ್, ಮಂಜು, ಪವನ್ ಮತ್ತು ಇತರ ಮೂವರೊಂದಿಗೆ ಬಂದಿದ್ದು, ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಕಾಲಿನಿಂದ ಒಡೆದು ಬಲವಂತವಾಗಿ ಅತ್ತೆಯ ಮನೆಗೆ ಪ್ರವೇಶಿಸಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಹೊಡೆದು ಎಳೆಯಲು ಪ್ರಯತ್ನಿಸಿದನು. ಮಹಿಳೆಯ ಸಹೋದರ ಪ್ರವೀಣ್ ಅವರನ್ನು ತಡೆಯಲು ಯತ್ನಿಸಿದಾಗ ಗ್ಯಾಂಗ್ ಆತನನ್ನು ಥಳಿಸಿ ಬಳಿಕ ತನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ.
ಈ ಸಂಬಂಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.