ಮಂಗಳೂರು, ಅ.20 (DaijiworldNews/PY): ದಸರಾ, ದೀಪಾವಳಿ ಹೀಗೆ ಹಬ್ಬದ ಸಂಭ್ರಮದ ಈ ಶುಭ ಪರ್ವಕಾಲದಲ್ಲಿ ಚಿನ್ನಾಭರಣಗಳ ಮಾರಾಟದಲ್ಲಿ ಭಾರತದ ಮುಂಚೂಣಿ ರಿಟೇಲ್ ಬ್ರಾಂಡ್ ಆಗಿರುವ ತನಿಷ್ಕ್ ಸಂಸ್ಥೆ ಉತ್ಸಾಹ್ ಹೆಸರಿನ ಹಬ್ಬದ ಹೊಸ ಸಂಗ್ರಹವನ್ನು ಪರಿಚಯಿಸಿದೆ. ಮಂಗಳೂರಿನಲ್ಲಿ ಈಗಾಗಲೇ ಮನೆಮಾತಾಗಿರುವ ನಗರದ ಕೇಂದ್ರ ಭಾಗದಲ್ಲಿ, ಬಲ್ಮಠ ಹಂಪನಕಟ್ಟೆ ರಸ್ತೆಯಲ್ಲಿರುವ ತನಿಷ್ಕ್ ಚಿನ್ನಾಭರಣ ಮಳಿಗೆಯಲ್ಲಿ ಉತ್ಸಾಹ್ ಆರಂಭಗೊಂಡಿದೆ.
ಉತ್ಸಾಹ್ ಎನ್ನುವುದು ಜೀವನದ ಹಬ್ಬ. ತನಿಷ್ಕ್ ಈ ಹಬ್ಬದ ಹೊಸ ಸಂಗ್ರಹವು ಸಂಸ್ಕೃತಿ, ಪರಂಪರೆ ಮತ್ತು ಆಧುನಿಕತೆಯ ಹಿತಮಿತ ಮಿಶ್ರಣದೊಂದಿಗೆ ಶುದ್ಧ ಚಿನ್ನದಲ್ಲಿ ಸಮಕಾಲೀನ ಆಭರಣಗಳ ಸೌಂದರ್ಯವನ್ನು ವಿಶೇಷ ಬಗೆಯಲ್ಲಿ ಪ್ರತಿನಿಧಿಸುತ್ತದೆ. ಈ ಸಂಗ್ರಹವು ಭಾರತದ ಶ್ರೀಮಂತ ಪರಂಪರೆಯನ್ನು ವಿಶಿಷ್ಟವಾದ ಆಧುನಿಕ ಆಭರಣಗಳ ರೂಪದಲ್ಲಿ ಪ್ರಕಟ ಪಡಿಸುತ್ತದೆ. ಈ ಸಂಗ್ರಹದಲ್ಲಿ ಸಂಕೀರ್ಣಮಯ ಮತ್ತು ಸೊಗಸಿನ ಆಕರ್ಷಕ ವಿನ್ಯಾಸಗಳು ಸರಳ ಚಿನ್ನ ಮತ್ತು ಅಲಂಕೃತ ಚಿನ್ನವನ್ನು ಒಳಗೊಂಡಿವೆ. ಈ ಸಂಗ್ರಹವು ಪರಂಪರೆ ಮತ್ತು ಸಮಕಾಲೀನತೆಯನ್ನು ಸಮರ್ಥವಾಗಿ ಪ್ರತಿನಿಧಿಸುತ್ತದೆ. ವಿಶೇಷವಾಗಿವೆ ಆಧುನಿಕತೆ ಮತ್ತು ಬಹುಮುಖತೆಯನ್ನು ಬಯಸುವ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಹೊಸ ವಿನ್ಯಾಸಗಳಿಗಾಗಿ ಹುಡುಕಾಟದಲ್ಲಿ ಇರುವವರ ಅಗತ್ಯಗಳನ್ನು ತನಿಷ್ಕ್ ಉತ್ಸಾಹ್ ಪೂರೈಸಲಿದೆ.
ಉತ್ಸಾಹ್ ಸಂಗ್ರಹವು, ಸಾಂಪ್ರದಾಯಿಕ ಗುಣ ಲಕ್ಷಣಗಳಿಗೆ ಆಧುನಿಕತೆಯ ಸ್ಪರ್ಶ ಮತ್ತು ಒತ್ತು ನೀಡುವುದರೊಂದಿಗೆ ಸಮಕಾಲೀನ ವಿನ್ಯಾಸದಲ್ಲಿ ತಾಜಾ ಶೈಲಿಯಲ್ಲಿ ಮರುರೂಪಿಸಿದ ಛಾಯಾರೂಪಗಳಾಗಿವೆ. ಸೂಕ್ಷ್ಮ ಮತ್ತು ಸುಸ್ಪಷ್ಟ ಸ್ವರೂಪದಲ್ಲಿ ಇರುವ ಈ ಹೊಸ ಸಂಗ್ರಹವು ಚಿನ್ನಾಭರಣಗಳನ್ನು ತಯಾರಿಸುವ ವಿವಿಧ ಕುಶಲ ತಂತ್ರಗಳಾದ ಆಧುನಿಕ ಫಿಲಿಗ್ರಿ, ಸ್ಟ್ಯಾಂಪ್ ಮತ್ತು ವೈರ್ ವರ್ಕ್, ಎನಾಮೆಲ್, ಜಾಲಿ ಓವರ್ ಸ್ಟೋನ್, ಟಿಕ್ಲಿ, ರವಾ ಮತ್ತು ಬಾಲ್ ವರ್ಕ್ಗಳನ್ನು ಹೊಂದಿದೆ. ಚಿನ್ನದ ಹೊಳಪನ್ನು ಸಂಭ್ರಮಿಸುವ, ವಿಭಿನ್ನ ವಿನ್ಯಾಸಗಳನ್ನು ಮತ್ತು ಮಾದರಿಗಳ ನೇಯ್ಗೆಯನ್ನು ಈ ಸಂಗ್ರಹವು ಪ್ರದರ್ಶಿಸುತ್ತದೆ.
ಈ ವರ್ಷದ ಹಬ್ಬದ ಪ್ರವೃತ್ತಿಗಳ ಬಗ್ಗೆ ಮುನ್ಸೂಚನೆ ಕಂಡಿರುವ ತನಿಷ್ಕ್, ಭವ್ಯವಾದ ನೋಟದ ಮತ್ತು ಸೊಗಸಾದ ಕೊರಳನ್ನು ಅಲಂಕರಿಸುವ ಸುಂದರ ಆಭರಣಗಳ ತಯಾರಿಕೆಗೆ ತನ್ನೆಲ್ಲ ಗಮನ ಕೇಂದ್ರೀಕರಿಸಿದೆ. ಇದು ಉತ್ಸಾಹ ಸಂಗ್ರಹದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ತನಿಷ್ಕ್ ಈ ಹೊಸ ಉತ್ಸಾಹ್ ಸಂಗ್ರಾಹವು ಸಂಕೀರ್ಣ, ಪರಂಪರೆ, ಹಳೆಯ ಹಾಗೂ ಸಮಕಾಲೀನ ವಿನ್ಯಾಸಗಳನ್ನು ಆಧುನಿಕ ಸಂವೇದನೆಗಳೊಂದಿಗೆ ಮೇಳೈಸಿದೆ. ಸಾಂಪ್ರದಾಯಿಕ ಕಸುಬುದಾರಿಕೆಗೆ ಈ ಸಂಗ್ರಹವು ಹೊಸ ದಿಕ್ಕು ನೀಡಿದೆ. ಈ ಸಂಗ್ರಹವು ಭಾರತದ ಪಾರಂಪರಿಕ ಕರಕುಶಲ ವಸ್ತುಗಳ ಮಾದರಿಗಳಿಂದ ಸ್ಪೂರ್ತಿ ಪಡೆದ ಆಧುನಿಕ-ಪರಂಪರೆಯ ವಿಶಿಷ್ಟ ಆಭರಣವಾಗಿದೆ. ಇದು ಈ ದೀಪಾವಳಿಯಲ್ಲಿ ಯಾವುದೇ ಮಹಿಳೆಯ ನೋಟವನ್ನು ಪೂರ್ಣಗೊಳಿಸಲು ಒಂದು ಪರಿಪೂರ್ಣ ಆಭರಣವಾಗಿರಲಿದೆ.
ತನಿಷ್ಕ್ ಪ್ರತಿ ವರ್ಷದಂತೆ ಈ ವರ್ಷವೂ ಅದರಲ್ಲೂ ವಿಶೇಷವಾಗಿ ಹಬ್ಬದ ಪರಿಪೂರ್ಣತೆಗಾಗಿ ನುರಿತ ಕುಶಲಕರ್ಮಿಗಳಿಂದ ಸುಂದರವಾಗಿ ವಿನ್ಯಾಸಗೊಳಿಸಿದ ಉತ್ಪನ್ನಗಳನ್ನು ತನಿಷ್ಕವು ಗ್ರಾಹಕರಿಗೆ ಪರಿಚಯಿಸುತ್ತಿದೆ. ಹಬ್ಬದ ಋತುವಿನಲ್ಲಿ ಪ್ರಮುಖ ಪ್ರವೃತ್ತಿಯಾಗಿ ಹೊರಹೊಮ್ಮಿರುವ ಹೊಸ ಆಭರಣ ಧರಿಸುವ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಸಂಗ್ರಹವನ್ನು ವಿನ್ಯಾಸಗೊಳಿಸಲಾಗಿದೆ.
ಉತ್ಸಾಹ್ ಎನ್ನುವುದು ಸಾಂಪ್ರದಾಯಿಕ ಲಕ್ಷಣಗಳ ಒಂದು ಸುಂದರ ಸಂಯೋಜನೆಯಾಗಿದ್ದು, ಕನಿಷ್ಠ ಸಮಕಾಲೀನ ಛಾಯಾರೂಪಗಳಲ್ಲಿ ಮರುಶೋಧಿಸಲಾಗಿದೆ. ವಿನ್ಯಾಸದ ಕಥೆಯು ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಆಭರಣ ವಿನ್ಯಾಸಗಳನ್ನು ಹೊಸ ಅವತಾರಗಳಲ್ಲಿ ಪ್ರಸ್ತುತಪಡಿಸುವ ಹೊಸ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದಿದೆ.
ಉತ್ಸಾಹ ಸಂಗ್ರಹದ ಇನ್ನೊಂದು ವಿಶೇಷತೆ ಏನೆಂದರೆ, ಇದರಲ್ಲಿ ಆಧುನಿಕ ಲಕ್ಷಣಗಳೊಂದಿಗೆ ಕುಶಲ ತಂತ್ರಗಳ ಸಮ್ಮಿಲನವಿದೆ ಮತ್ತು ಲೇಯರಿಂಗ್ ಬಳಕೆಯು ವಿಸ್ತಾರವಾದ ವಿಶೇಷ ನೋಟವನ್ನು ನೀಡುತ್ತದೆ. ವಿನ್ಯಾಸ ಮತ್ತು ಕುಶಲ ತಂತ್ರಗಳ ಬುದ್ಧಿವಂತಿಕೆಯ ಬಳಕೆಯು ಕೈಗೆಟುಕುವ ಮತ್ತು ಸೌಂದರ್ಯದ ವಿಷಯದಲ್ಲಿ ಸಂಪೂರ್ಣ ಆನಂದವನ್ನು ಸಾಧಿಸ ಬಹುದಾಗಿದೆ.
ದಸರ ಹಬ್ಬದ ಹಿನ್ನಲೆಯಲ್ಲಿ ಶನಿವಾರ ಸಂಜೆ ಮಂಗಳೂರಿನ ತನಿಷ್ಕ್ ಚಿನ್ನಾಭರಣ ಮಳಿಗೆಯ ಮುಂಭಾಗ ಮಂಗಳೂರಿನ ಪ್ರಖ್ಯಾತ ಶಾರದ ಹುಲಿ ತಂಡದಿಂದ ಹುಲಿ ಕುಣಿತ ನಡೆಯಿತು. ಮಳಿಗೆಗೆ ಭೇಟಿ ನೀಡಿದ ಗ್ರಾಹಕರು ಹಾಗೂ ಸಾರ್ವಜನಿಕರ ಮನ ಸೆಳೆಯಿತು.
ಈ ಸಂದರ್ಭ ಸಂಸ್ಥೆಯ ಮ್ಯಾನೇಜರ್ ಅಕ್ಷಯ್ ವಿಜಯ ಬಂಜನ್, ಫ್ರಾಂಚೈಸಿ ಖಾದರ್ ಹಾರೂನ್ ಉಪಸ್ಥಿತರಿದ್ದರು.