ಕಾಸರಗೋಡು, ಅ. 19 (DaijiworldNews/SM): ವಿದ್ಯುತ್ ಶಾಕ್ ತಗುಲಿ ಎಂಟು ವರ್ಷದ ಬಾಲಕ ಮೃತ ಪಟ್ಟ ಘಟನೆ ಮಂಗಳವಾರ ವರ್ಕಾಡಿ ಸಮೀಪದ ಮೊರತ್ತನೆಯಲ್ಲಿ ನಡೆದಿದೆ.
ಮೊರತ್ತನೆಯ ಆಟೋ ರಿಕ್ಷಾ ಚಾಲಕ ಸದಾಶಿವ ಶೆಟ್ಟಿ ರವರ ಪುತ್ರ ಮೋಕ್ಷಿತ್ ರಾಜ್ ಶೆಟ್ಟಿ ಮೃತ ಪಟ್ಟ ಬಾಲಕ. ಈತ ತಲೆಕ್ಕಲ ಎಲ್.ಪಿ ಶಾಲೆಯ ವಿದ್ಯಾರ್ಥಿಯಾಗಿದ್ದನು. ಮಂಗಳವಾರ ಸಂಜೆ ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಇನ್ನೊಂದು ಮನೆಯ ಮೇಲ್ಭಾಗ ಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಮೇಲ್ಭಾಗ ದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ಲೈನ್ ತಾಗಿ ಈ ದುರಂತ ನಡೆದಿದೆ.
ಸಂಜೆ ಐದು ಗಂಟೆ ಸುಮಾರಿಗೆ .ಮನೆಯಿಂದ ಆಟವಾಡಲು ಹೊರ ಹೋಗಿದ್ದ ಬಾಲಕ ತಡವಾದರೂ ಮನೆಗೆ ಬಾರ ದಿದ್ದುದರಿಂದ ಮನೆಯವರು ಶೋಧ ನಡೆಸಿದಾಗ ನಿರ್ಮಾಣ ಹಂತದ ಮನೆಯ ಟೆರೇಸ್ ನಲ್ಲಿ ವಿದ್ಯುತ್ ಶಾಕ್ ತಗುಲಿ ಬಿದ್ದಿರುವುದು ಕಂಡು ಬಂದಿದೆ. ಮೃತ ದೇಹವನ್ನು ಮಂಗಲ್ಪಾಡಿ ಯಲ್ಲಿರುವ ತಾಲೂಕು ಆಸ್ಪತ್ರೆ ಯ ಶವಾಗಾರದಲ್ಲಿರಿಸಲಾಗಿದೆ.