ಮಂಗಳೂರು, ಅ. 19 (DaijiworldNews/SM): ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಮೂಡುಶೆಡ್ಡೆ ಇದರ ವತಿಯಿಂದ ಈದ್ ಮಿಲಾದ್ ಹಬ್ಬ ಸರಳ ಆಚರಿಸಲಾಯಿತು.
ಈ ವೇಳೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಖತೀಬರಾದ ನಝೀರ್ ದಾರಿಮಿ ಶಂಬೂರು ದುಅ ನೇತೃತ್ವ ವಹಿಸಿದ್ದರು. ಬಳಿಕ ಮದ್ರಸ ವಿದ್ಯಾರ್ಥಿಗಳಿಂದ ಮಹಮ್ಮದ್ ಪೈಗಂಬರ್ ಅವರ ಮದ್ಹ್ ಗೀತೆ ಮತ್ತು ಜೀವನ ಚರಿತ್ರೆ ಬಗ್ಗೆ ಪ್ರವಚನ ಕಾರ್ಯಕ್ರಮ ನಡೆಯಿತು. ಈ ವೇಳೆ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ, ಮೂಡುಶೆಡ್ಡೆ ಗ್ರಾಮ ಪಂಚಾಯತ್ ಸದಸ್ಯರಾಸ ಶಾಜುದ್ದೀನ್,ಮೂಡುಶೆಡ್ಡೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಮಹಮ್ಮದ್ ಹನೀಫ್ ಖಾಸಿಮಿ, ಮೂಡುಶೆಡ್ಡೆ ಮಸೀದಿ ಮುಅಲ್ಲಿಂ ಮುಜಿಬುರಹ್ಮಾನ್ ಮುಸ್ಲಿಯಾರ್, ಮೂಡುಶೆಡ್ಡೆ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಶರೀಫ್, ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಗುರುಗಳಾದ ಅಬ್ದುಲ್ಲಾ ದಾರಿಮಿ, ಹಾಜಿ ಮಹಮ್ಮದ್ ಹನೀಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.