ಉಡುಪಿ, ಅ. 19 (DaijiworldNews/SM): ಸಿದ್ಧರಾಮಯ್ಯ ಎಂದೆಂದಿಗೂ ಹಿಂದುತ್ವದ ವಿರೋಧಿಯಾಗಿದ್ದು, ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸಿದ್ದರಾಮಯ್ಯರಂತಹ ಜವಾಬ್ದಾರಿಯುತ ವ್ಯಕ್ತಿಗೆ ಶೋಭೆ ತರದು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಾಂಗ್ರೆಸ್ ನಾಯಕರ ಹಾಗೂ ಸಿದ್ದರಾಮಯ್ಯ ವಿರುದ್ಧ ಆರೋಪಗಳನ್ನು ನಿರಾಕರಿಸಲು ಅವಕಾಶವಿದೆ. ಆದರೆ, ಸಿದ್ಧರಾಮಯ್ಯ ಆರ್ ಎಸ್ ಎಸ್ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಆರ್ ಎಸ್ ಎಸ್ ನ್ನು ಅಫ್ಘಾನಿಸ್ತಾನದ ಉಗ್ರರಿಗೆ ಹೋಲಿಸಿದ್ದಾರೆ. ದೇಶ ಭಕ್ತ ಸಂಘಟನೆ ಬಗ್ಗೆ ಮಾತನಾಡಿರುವುದು ನಮಗೆ ನೋವುಂಟು ಮಾಡಿದೆ. ನಳಿನ್ ಕುಮಾರ್ ಆಡಿದ ಮಾತನ್ನು ನಿರಾಕರಿಸಲು ಅವಕಾಶವಿದೆ
ಆದರೆ ಈ ಬಗ್ಗೆ ವ್ಯರ್ಥ ಚರ್ಚೆಯ ಅಗತ್ಯವಿಲ್ಲ.
ಕಾಂಗ್ರೆಸ್ ಪಕ್ಷ ಆಡಳಿತಾತ್ಮಕ ವಿಚಾರದಲ್ಲಿ ಲೋಪಗಳಿದ್ದಲ್ಲಿ ಅದನ್ನು ಹೇಳಿ ಎಂದಿದ್ದಾರೆ. ಅಲ್ಲದೆ, ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವು ಖಚಿತ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.