ಮಂಗಳೂರು, ಅ.18 (DaijiworldNews/HR): ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿ ಸಿ ಸಮೀಪದ ಕಟ್ಟಡದ ಹೊಟೇಲ್ ಮತ್ತು ಲಾಡ್ಜ್ ಕಸವನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಹಾಕುತ್ತಿದ್ದು, ಅಂತಹ ಹೊಟೇಲ್ ಕಟ್ಟಡದ ಮಾಲೀಕರಿಗೆ ಇಂದು ಅಧಿಕಾರಿಗಳು ದಂಡವನ್ನು ವಿಧಿಸಿದ್ದಾರೆ.
ಕೆಎಸ್ಆರ್ಟಿ ಸಿ ಸಮೀಪದ ಕಟ್ಟಡದ ಹೊಟೇಲ್ ಮತ್ತು ಲಾಡ್ಜ್ ಕಸವನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಹಾಕುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಯಾವಾಗಲೂ ತೊಂದರೆ ಆಗುತ್ತಿದ್ದು, ಇದಕ್ಕೆ ಪಾಲಿಕೆಯ ಅಧಿಕಾರಿಗಳು ನೋಟೀಸ್ ನೀಡಿದರು ಎನು ಪ್ರಯೋಜನವಾಗಿರಲ್ಲ.
ಇನ್ನು ಇಂದು ಸಾರ್ವಜನಿಕ ಗಲಾಟೆ ಮಾಡಿದ ಕಾರಣದಿಂದಾಗಿ ಅಧಿಕಾರಿಗಳು ಕಸವನ್ನು ಅವರ ಕಟ್ಟಡಕ್ಕೆ ಬಂದು ಸುರಿದು ಬಿಸಿ ಮುಟ್ಟಿಸಿದರು .ಮತ್ತು ಹೊಟೇಲು ಕಟ್ಟಡದ ಮಾಲೀಕರಿಗೆ ದಂಡವನ್ನು ವಿಧಿಸಲಾಯಿತು.