ಕಾಸರಗೋಡು, ಅ.18 (DaijiworldNews/PY): ತೆರಿಗೆ ವಂಚಿಸಿ ಲಾರಿಯಲ್ಲಿ ಸಾಗಾಟ ಮಾಡಲೆತ್ನಿಸಿದ 68 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಮಂಜೇಶ್ವರದಿಂದ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೋಜಿಕ್ಕೋಡ್ನಿಂದ ದೆಹಲಿಗೆ ತೆರಿಗೆ ವಂಚಿಸಿ ಸಾಗಾಟ ಮಾಡಲಾಗುತ್ತಿತ್ತು.
ಲಾರಿಯ ದಾಖಲೆಗಳನ್ನು ತಪಾಸಣೆ ನಡೆಸಿದಾಗ ತೆರಿಗೆ ವಂಚಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಸುಮಾರು 68 ಲಕ್ಷ ರೂ. ಗಳ ಅಡಿಕೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಬಳಿಕ 16.50 ಲಕ್ಷ ರೂ. ದಂಡ ವಿಧಿಸಿ ಬಿಟ್ಟುಕೊಡಲಾಯಿತು.