ಪುತ್ತೂರು, ಅ.18 (DaijiworldNews/PY): ಎಂಡೋಸಲ್ಫಾನ್ ಸಂತ್ರಸ್ತನ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ಹನೀಫ್ (67) ಎಂದು ಗುರುತಿಸಲಾಗಿದೆ.
ಕಬಕ ಗ್ರಾಮದ ಮುರ ನಿವಾಸಿ ವೆಂಕಟ್ರಮಣ ಭಟ್ ಅವರ ಪುತ್ರ ಗುರುಪ್ರಸಾದ್ (20) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎಂಡೋ ಪೀಡಿತ ಯುವಕ. ಈತ ಎಂದಿನಂತೆ ಸಂಜೆ ವೇಳೆ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಮುರ ರೈಲ್ವೇ ಜಂಕ್ಷನ್ ಬಳಿ ಆರೋಪಿ ಕಬ್ಬು ನೀಡುವುದಾಗಿ ಹೇಳಿ ಪಕ್ಕದಲ್ಲಿರುವ ಪೊದೆಯೊಂದರ ಬಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಆರೋಪಿ ಆತನಿಗೆ ಜೀವ ಬೆದರಿಕೆ ಹಾಕಿದ್ದಾನೆ.
ಘಟನೆಯ ಬಗ್ಗೆ ಸಂತ್ರಸ್ತನ ತಂದೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.