ಕಾರ್ಕಳ, ಅ 16 (DaijiworldNews/MS): ಅಸ್ತಮಾ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕುಡಿತದ ಚಟಕ್ಕೆ ಒಳಗಾಗಿ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿರುವ ಘಟನೆ ಕಡ್ತಲದ ಕಕ್ಕೆನಾಡು ದರ್ಕಾಸು ಮನೆಯಲ್ಲಿ ನಡೆಸಿದೆ.
ಸಂಜೀವ ಕುಲಾಲ್(76) ಘಟನೆಯಲ್ಲಿ ಬದುಕಿಗೆ ಅಂತ್ಯ ಹೇಳಿದವರು.
ರೋಗ ಶಮನಕ್ಕೆ ಹಲವೆಡೆಗಳಲ್ಲಿ ಔಷಧಿ ಪಡೆದು ಗುಣಮುಖರಾಗದೇ ಹೋದಾಗ ಮದ್ಯ ಸೇವನೆಯ ಚಟಕ್ಕೆ ಒಳಗಾಗಿದ್ದರು. ಅಕ್ಟೋಬರ್ ೧೫ರ ಸಂಜೆ ವೇಳೆಗೆ ಮನೆಯಲ್ಲಿ ಇತರ್ಯಾರು ಇಲ್ಲದ ಸಮಯದಲ್ಲಿ ಮನೆಯ ಮುಂದೆ ಹಾಕಲಾಗಿದ್ದ ಚಪ್ಪರದ ಜಂತಿಗೆ ಚೂಡಿದಾರದ ಶಾಲನ್ನು ಕಟ್ಟಿ ಉರುಳು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821