ಕಾಸರಗೋಡು, ಅ 16 (DaijiworldNews/MS): ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕುಂಬಳೆಯ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ರಾತ್ರಿ ತಲಪಾಡಿ ಕೆ.ಸಿ ರೋಡ್’ನಲ್ಲಿ ನಡೆದಿದೆ.
ಕುಂಬಳೆ ಕುಂಟಗೇರಡ್ಕದ ಕೆ . ಪ್ರಜಿತ್ ( 23) ಮತ್ತು ಕೃಷ್ಣ ಪ್ರಸಾದ್ (25) ಮೃತಪಟ್ಟವರು. ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಯ ಕೆ .ಸಿ ರೋಡ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ.