ಮಂಗಳೂರು, ಅ. 15 (DaijiworldNews/SM): ನವರಾತ್ರಿ ಪ್ರಯುಕ್ತ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುವ ನೂತನ್ ಕ್ಲೋತ್ ಸೆಂಟರ್, ಮಡಂತ್ಯಾರು ಆಯೋಜಿಸಿದ ’ನವರಂಗಿ ಸೀರೆ-ಫೋಟೊ ಸ್ಪರ್ದೆ’ ನೇರ ಪ್ರಸಾರ ಕಾರ್ಯಕ್ರಮಕ್ಕೆ ಅಭೂತಪೂರ್ವವಾಗಿ ಮೂಡಿಬಂದಿದೆ.
ಕರಾವಳಿ ಸೇರಿದಂತೆ ವಿವಿಧೆಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಂಬತ್ತು ದಿನಗಳ ಸ್ಪರ್ಧೆ ಇಂದು ಮುಕ್ತಾಯಗೊಂಡಿದ್ದು, ಕೊನೆಯ ದಿನವಾದ ಇಂದು ನೇರಳೆ ಬಣ್ಣದ ಸೀರೆ ಸ್ಪರ್ಧೆಯಲ್ಲಿ ಲಕ್ಕಿ ಚಾರ್ಮ್ಸ್ ಉಪ್ಪಿನಂಗಡಿ ತಂಡ ಬಹುಮಾನ ಗೆದ್ದುಕೊಂಡಿದೆ. ಇನ್ನು ವಾರಪೂರ್ತಿ ನಡೆದ ಸ್ಪರ್ಧೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಈ ಹಿಂದೆ ಘೋಷಿಸಿದಂತೆ ಬಂಪರ್ ಬಹುಮಾನಗಳನ್ನು ಕೂಡ ನೀಡಲಾಗಿದೆ. ಹದಿನೈದು ಸಾವಿರ ರೂಪಾಯಿ ಬಂಪರ್ ಬಹುಮಾನವನ್ನು ಶಿವಸಂಚಿ ಕೊಲ್ಯ, ಸೋಮೇಶ್ವರ ತಂಡ ಪಡೆದುಕೊಂಡಿದ್ದು, ಎರಡನೇ ಬಂಪರ್ ಬಹುಮಾನಕ್ಕೆ ಮಂಗಳೂರಿನ ಮರೊಳಿಯ ಟೀಂ ಜ್ಯೋತಿಷ್ಮತಿ ಆಯ್ಕೆಯಾಗಿದೆ. ಇನ್ನು ಪವಿತ್ರ ಪೂಜಾರಿ ಈ ಕಾರ್ಯಕ್ರಮ ನಿರೂಪಿಸಿದ್ದಾರೆ.