ಮಂಗಳೂರು, ಅ. 15 (DaijiworldNews/SM): ಪ್ರತೀ ವರ್ಷದಂತೆ ಈ ಬಾರಿಯ ಬಿರುವೆರ್ ಕುಡ್ಲ ಪ್ರೆಂಡ್ಸ್ ಬಲ್ಲಾಳ್ಬಾಗ್ ವತಿಯಿಂದ ನಡೆದ ಹುಲಿ ಕುಣಿತ ಜನರನ್ನು ಮನಸೂರೆಗೊಳಿಸಿದೆ.
ಆರಂಭದಲ್ಲಿ ಕುದ್ರೋಳಿ ದೇಗುಲ ಅಂಗಳದಲ್ಲಿ ಪಿಲಿ ನಲಿಕೆ ಕುಣಿದ ಬಿರುವೆರ್ ಕುಡ್ಲ ತಂಡದವರು ಬಳಿಕ ಕದ್ರಿ ದೇಗುಲದ ಅಂಗಳದಲ್ಲೂ ಹೆಜ್ಜೆ ಹಾಕಿ ಜನರನ್ನು ರಂಜಿಸಿದರು. ಬಳಿಕ ಯೆಯ್ಯಾಡಿ ಪರಿಸರದ ಮೈದಾನದಲ್ಲಿ ಹೆಜ್ಜೆ ಹಾಕಿದ ಹುಲಿ ಕುಣಿತಾಧಾರಿಗಳು ಜನರಿಗೆ ಮನೋರಂಜನೆ ನೀಡಿದರು.
ಇನ್ನು ಕಳೆದ 7 ವರ್ಷಗಳಿಂದ ಬಿರುವೆರ್ ಕುಡ್ಲ ತಂಡದಿಂದ ಹುಲಿ ವೇಷ ಕುಣಿತ ಆಯೋಜಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಸಕ್ಕತ್ ಮನೋರಂಜನೆ ನೀಡುತ್ತಿದ್ದಾರೆ. ಈ ಬಾರಿ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸಿಕೊಂಡು ಹುಲಿ ವೇಷ ಕುಣಿತ, ಪ್ರದರ್ಶನ ನಡೆಸಲಾಗಿದೆ.