ಕಾರ್ಕಳ, ಅ 15 (DaijiworldNews/MS): ವಿದ್ಯುತ್ ಸರಬರಾಜುನಲ್ಲಿ ಉಂಟಾದ ವ್ಯತ್ಯಯದಿಂದಾಗಿ ತೆಳ್ಳಾರಿನ ಬೆದ್ರಪಲ್ಕೆ ಪರಿಸರದಲ್ಲಿ ವಿದ್ಯುತ್ ಪರಿವರ್ತಕದಲ್ಲಿ ಏಕಾಏಕಿ ಭಾರೀ ಬೆಂಕಿ ಕಾಣಿಸಿ ಪರಿಸರದ ನಾಲ್ಕು ಮನೆಗಳ ವಿದ್ಯುತ್ ವಯರಿಂಗ್ ಸಹಿತ ಬೆಲೆಬಾಳುವ ಪರಿಕರಗಳು ಸುಟ್ಟು ನಷ್ಟಕ್ಕೊಳಗಾಗಿದೆ.
ತೆಳ್ಳಾರು ಬೆದ್ರಪಲ್ಕೆಯ ಮೋಹಿನಿ ಗೌಡ, ಗೋವಿಂದ ನಾಯ್ಕ, ಶಶಿಧರ ಶೆಟ್ಟಿ ಹಾಗೂ ಲಲಿತ ನಾಯ್ಕ ರವರ ವಿದ್ಯುತ್ ಸಂಬಂಧಿತ ಪರಿಕರಗಳಿಗೆ ಹಾನಿಯಾಗಿರುತ್ತದೆ. ಘಟನೆ ಸಂಭವಿಸಿದ ಮನೆಗಳಿಗೆ ದುರ್ಗ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್, ಸದಸ್ಸರಾದ ದೇವಕಿ, ಪ್ರಮೀಳಾ ಆಚಾರ್ಯ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಷ್ಟಕ್ಕೊಳಗಾದ ಪರಿಕರಗಳು:
ವಿದ್ಯುತ್ ಪರಿವರ್ತಕ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು 4 ಮನೆಗಳ ವೈರಿಂಗ್ ಸುಟ್ಟು ಹೋಗಿದಲ್ಲದೇ ಟಿವಿ, ಫಿಡ್ಜ್, ಫ್ಯಾನ್, ಬಲ್ಬ್, ಟ್ಯೂಬ್ಗಳು ಸಹಿತ ಇತರ ವಸ್ತುಗಳು ಹಾನಿಯಾಗಿರುತ್ತದೆ.
ಟ್ರಿಪರ್ ವೈಫಲ್ಯ?!
ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲುಗಳು ಅಥವಾ ಪ್ರಾಣಿಗಳು ಉಪಟಳದಿಂದ ಹೆಚ್ಚಾದಾಗ ವಿದ್ಯುತ್ ಲೈನ್ಗಳು ಟ್ರಿಪ್ ಆಗುತ್ತಿರುವುದು ಸರ್ವೇ ಸಾಮಾನ್ಯವಾಗಿರುತ್ತದೆ. ತೆಳ್ಳಾರಿನಲ್ಲಿ ಈ ಹಿಂದೆಯೂ ಇದೇ ರೀತಿ ಆದಾಗ ಲೈನ್ಗಳು ಟ್ರಿಪ್ ಆಗದೇ ಇರುವ ಕಾರಣದಿಂದ ವಿದ್ಯುತ್ ಕಡಿತಗೊಳ್ಳದೇ ವಿದ್ಯುತ್ ಪರಿಕರಗಳು ನಷ್ಟವಾಗುತ್ತಿರುವುದು ಈ ಪರಿಸರ ಸರ್ವೇ ಸಾಮಾನ್ಯವಾಗಿರುತ್ತದೆ ಎಂದು ಸ್ಥಳೀಯರ ಆರೋಪವಾಗಿದೆ. ಇಲ್ಲಿ ನಡೆದ ಘಟನೆಯ ಹಾನಿಗೆ ಯಾರು ಹೊಣೆಗಾರರಾಗಿರುತ್ತದೆ. ನಷ್ಟ ಪ್ರಮಾಣದಲ್ಲಿ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ದುರ್ಗಾ ಗ್ರಾಮ ಪಂಚಾಯತ್ ಆಡಳಿತದ ಪರಿವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಅವರು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.