ಉಡುಪಿ, ಅ 14 (DaijiworldNews/MS): ಬ್ರೈನ್ ಸ್ಟ್ರೋಕ್ ನಿಂದ ಅ. 7 ರಂದು ದುಬೈ ಜಬೇಲ್ ಅಲಿಯ ಏನ್. ಎಮ್. ಸಿ. ರೋಯಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಅಬ್ದುಲ್ ರಹ್ಮಾನ್ ರವರು ಮೃತದೇಹ ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ. ಸಹಕಾರದಿಂದ ತಾಯ್ನಾಡಿಗೆ ಬಂದು ತಲುಪಿದೆ.
ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ ಇದರ ಶಫಿ ಬಜ್ಪೆ, ಹಮೀದ್ ಸತ್ತಿಕಲ್, ರಿಯಾಜ್ ಜೋಕಟ್ಟೆ, ಹಾಗೂ ಇಕ್ಬಾಲ್ ಬೆಳ್ತಂಗಡಿಯವರು ಅಬ್ದುಲ್ ರಹ್ಮಾನ್ ರವರ ಮೃತದೇಹಕ್ಕೆ ಸಂಬಂಧಪಟ್ಟ ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ತಾಯ್ನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.