ಮಂಗಳೂರು, ಅ.14 (DaijiworldNews/PY): ಕರಾವಳಿಯಲ್ಲಿ ಇಂದು ಸಂಭ್ರಮದ ಆಯುಧ ಪೂಜೆ ನಡೆಯುತ್ತಿದ್ದು, ನಗರದ ಎಲ್ಲಾ ದೇವಸ್ಥಾನ ಮಂದಿರಗಳಲ್ಲಿ ವಾಹನಗಳಿಗೆ ಆಯುಧ ಪೂಜೆ ಮಾಡಲಾಯಿತು.
ಆಯುಧ ಪೂಜೆಯ ದಿನದಂದು, ವಾಹನಗಳು ಸೇರಿದಂತೆ ಗ್ಯಾರೇಜ್, ಇಂಜಿನಿಯರಿಂಗ್ ವರ್ಕ್ಸ್ ಶಾಪ್, ಖಾಸಗಿ ಕಚೇರಿಗಳಲ್ಲಿ ಪೂಜೆ ಮಾಡಲಾಯಿತು.
ಒಂದು ದಿನ ಮುಂಚಿತವಾಗಿ ಭಕ್ತರು ತಮ್ಮ ವಾಹನಗಳು, ಕಂಪ್ಯೂಟರ್ ಹಾಗೂ ಆಯುಧ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಿಂದಲೇ ಭಕ್ತರು ದೇವಾಲಯಗಳುಗೆ ತೆರಳಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಿದ್ದಾರೆ.
ಆಯುಧ ಪೂಜೆ ಮಹತ್ವ: ಮಹಿಷನನ್ನು ಸಂಹರಿಸಲು ದುರ್ಗಾ ದೇವಿ ಉಪಯೋಗಿಸಿದ ಆಯುಧಗಳನ್ನು ಭೂಲೋಕಕ್ಕೆ ಎಸೆದಿದ್ದು, ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು. ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು.