ಕಾಸರಗೋಡು, ಅ.13 (DaijiworldNews/HR): ಜಿಲ್ಲೆಯಲ್ಲಿ ಕೊರೊನಾ ಮಾನದಂಡ ಉಲ್ಲಂಘಿಸಿದ ಹಿನ್ನಲೆಯಲ್ಲಿ ಇದುವರಗೆ 4.25 ಕೋಟಿ ರೂ. ದಂಡ ವಸೂಲು ನಡೆಸಲಾಗಿದೆ ಎಂದು ಅಂಕಿ ಅಂಶ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಬುಧವಾರ ವಿಧಾನಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನುರವರ ಪ್ರಶ್ನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಉತ್ತರದಲ್ಲಿ ಅಂಕಿ ಅಂಶ ತಿಳಿಸುತ್ತಿದೆ.
ಕಾಸರಗೋಡು ನಗರ ಠಾಣಾ ವ್ಯಾಪ್ತಿಯಲ್ಲಿ ಅತ್ಯಧಿಕ 40 ಲಕ್ಷ ರೂ. ವಸೂಲು ಮಾಡಲಾಗಿದೆ. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯದ, ಕ್ವಾರಂಟೈನ್ ಉಲ್ಲಂಘನೆ ಹೀಗೆ ಹಲವು ರೀತಿಯಲ್ಲಿ ದಂಡ ವಸೂಲು ಮಾಡಲಾಗಿದೆ.
ಮಂಜೇಶ್ವರ 20. 65 ಲಕ್ಷ ರೂ., ಕುಂಬಳೆ 15. 70 ಲಕ್ಷ ರೂ., ವಿದ್ಯಾನಗರ 33 ಲಕ್ಷ ರೂ., ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ 20 ಲಕ್ಷ ರೂ. ಸೇರಿದಂತೆ ಜಿಲ್ಲೆಯ 18 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4.25 ಕೋಟಿ ರೂ.ವನ್ನು ವಸೂಲು ಮಾಡಲಾಗಿದೆ.