ಉಡುಪಿ, ಅ.13 (DaijiworldNews/HR): ಮಕ್ಕಳಿಗೆ ಲಸಿಕೆ ವಿಚಾರವಾಗಿ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ "ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಕಮರ್ಷಿಯಲೈಶನ್ ಮಾಡಲು ಪ್ರಮಾಣ ಪತ್ರದ ನಿರೀಕ್ಷೆಯಲ್ಲಿದ್ದೇವೆ" ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ರಾಜ್ಯದಲ್ಲಿ 82 ರಷ್ಟು ಮೊದಲ ಡೋಸ್, 36-37% ರಷ್ಟು ಎರಡನೇ ಡೋಸ್ ಕೊಟ್ಟಿದ್ದು, ಅದನ್ನು ಡಿಸೆಂಬರ್ ರಷ್ಟರೊಳಗೆ 90 ರಷ್ಟು ಮೊದಲ ಡೋಸ್, 70% ಸೆಕೆಂಡ್ ಡೋಸ್ ಗುರಿ ತಲುಪುವ ಚಿಂತನೆ ಹೊಂದಿದ್ದೇವೆ. ಈ ಎಲ್ಲಾ ಹಿನ್ನೆಲೆಯಲ್ಲಿ 2-19 ರ ಒಳಗಿನ ಮಕ್ಕಳ ರಕ್ಷಣೆ ಎಲ್ಲರ ಹೊಣೆ . ಅದಕ್ಕಾಗಿ ಸರಕಾರ ಏನು ಕ್ರಮತೆಗೆದು ಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ಅಂತಿಮ ನಿರ್ಧಾರ ಆದಮೇಲೆ ಸೂಕ್ತ ಕ್ರಮದೊಂದಿಗೆ ತೆಗೆದುಕೊಳ್ಳುತ್ತೇವೆ" ಎಂದರು.
ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನನ್ನು ತರುವ ಕುರಿತು ಮಾತನಾಡಿದ ಅವರು, ಈ ಬಗ್ಗೆ ಬಹಳಷ್ಟು ಚಿಂತನೆ ಮಾಡಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಕಾಯ್ದೆ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಆದಷ್ಟು ಬೇಗನೆ ಕಾನೂನು ತರಬೇಕಾಗಿ ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಇನ್ನು ಡಿಕೆಶಿ ರಹಸ್ಯ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಲು ಸಿ.ಎಂ ನಿರಾಕರಿಸಿದ್ದಾರೆ.